ಇಂದು ಪುಷ್ಯ ನಕ್ಷತ್ರವಿದ್ದರೆ ಗುರುಪುಷ್ಯಯೋಗ ಎನ್ನಲಾಗುತ್ತದೆ. ಈ ದಿನ ದೇವಗುರುವಾದ ಶ್ರೀಬೃಹಸ್ಪತಿ ಯ ಜತೆ ಗುರುಗಳ ಸ್ಮರಣೆ ಅತ್ಯಂತ ಪುಣ್ಯದಾಯಕ, ಗುರುಗಳ ಜಪ, ಸ್ಮರಣೆ ಫಲದಾಯಕ.
ದೇವ ಗುರುವಾದ ಬೃಹಸ್ಪತಿಯನ್ನು ನೆನಯೋಣ.
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ ।ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ॥
ಕುಡುಮ ಕ್ಷೇತ್ರವನ್ನು ಧರ್ಮಸ್ಥಳ ಕ್ಷೇತ್ರ ವನ್ನಾಗಿಸಿದ ಶ್ರೀವಾದಿರಾಜತೀರ್ಥ ಶ್ರೀಪಾದರು ಹಾಗೂ ಕಲಿಯುಗದ ಕಾಮಧೇನುವಾದ ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರ ತೀರ್ಥ ಗುರು ಸಾರ್ವಭೌಮ ರನ್ನ ಸ್ಮರಿಸಿ ಧನ್ಯರಾಗೋಣ.
ತಪೋ ವಿದ್ಯಾ ವಿರಕ್ತ್ಯಾದಿ ಸದ್ಘುಣೌ ಘಾಕರಾನಹಮ್ |
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯನ್ ||
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ।
ಶ್ರೀರಾಘವೇಂದ್ರ ಗುರುವೇ ನಮೋಅತ್ಯಂತ ದಯಾಳವೇ ||
ಆಪಾದಮೌಳಿಪರ್ಯಂತಂ ಗುರುಣಾಮಾಕೃತಿಂ ಸ್ಮರೇತ್ |
ತೇನವಿಘ್ನಃ ಪ್ರಣಶ್ಯಂತಿ ಸಿದ್ಧ್ಯಂತಿ ಚ ಮನೋರಥಾಃ ||
ಶ್ರೀರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಜಪಿಸಿ ಪುನೀತರಾಗಿ. ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಂತರ್ಗತ ಶ್ರೀವೇದವ್ಯಾಸ ದೇವರು ಎಲ್ಲರನೂ ಕಾಯಲಿ
ಶುಭಮಸ್ತು…
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.