ಉಡುಪಿ: ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಪರ್ಯಾಯ ಪೂರ್ವಭಾವಿ ದೇಶ ಸಂಚಾರದ ಅನುಕೂಲಕ್ಕಾಗಿ ಭೀಮಾ ಗೋಲ್ಡ್ ವತಿಯಿಂದ ವಿಶೇಷ ಫೋರ್ಸ್ ಟೆಂಪೋ ವಾಹನವನ್ನು (C. S . R ಆಕ್ಟಿವಿಟಿ )ಶ್ರೀಗಳಿಗೆ ವಿಶೇಷ ಕೊಡುಗೆಯಾಗಿ ನೀಡಲಾಯಿತು.
ಭೀಮಾ ಜುವೆಲ್ಲರಿ ಮ್ಯಾನೇಜಿಂಗ್ ಡೈರೆಕ್ಟರ್ ವಿಷ್ಣು ಶರಣ್ ಭಟ್ ಸೂಚನೆಯಂತೆ ಭೀಮಾ ಸಂಸ್ಥೆಯ ಕ್ಲಸ್ಟರ್ ಹೆಡ್ ಕಾರ್ತಿಕ್ ರಾವ್, ಸೇಲ್ಸ್ ವಿಭಾಗದ ಮುಖ್ಯಸ್ಥ ಗುರುಪ್ರಸಾದ್ ರಾವ್, ಡೆಪ್ಯುಟಿ ಮ್ಯಾನೇಜರ್ ರಾವೇಂದ್ರ ಭಟ್ ಉಪಸ್ಥಿತಿಯಲ್ಲಿ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಕೀ ಹಸ್ತಾಂತರಿಸಿದರು.