ಉಡುಪಿ: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಶನಿವಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ರೀಮತಿ ಶ್ಯಾಮಲಾ ಕುಂದರ್ ಭೇಟಿ ನೀಡಿದರು. ದೇವಳದ ಆಡಳಿತ ಮುಕ್ತೇಸರ ಪಿ ವಿ ಶೆಣೈ ಶ್ರೀ ದೇವರ ಪ್ರಸಾದ ದೊಂದಿಗೆ ಶಾಲು ಹೊದಿಸಿ ಅವರನ್ನು ಗೌರವಿಸಿದರು.
ಪ್ರದಾನ ಅರ್ಚಕ ದಯಾಘನ್ ಭಟ್ ಶ್ರೀ ದೇವರಿಗೆ ಮಹಾ ಪೂಜೆ ನೆರವೇರಿಸಿದರು. ಮಾಜಿ ನಗರ ಸಭಾ ಸದಸ್ಯ ಶ್ಯಾಮ ಪ್ರಸಾದ್ ಕುಡ್ವ , ಮಟ್ಟಾರು ವಸಂತ ಕಿಣಿ , ರೋಹಿತಾಕ್ಷ ಪಡಿಯಾರ್ , ಜಯರಾಮ ಕಾಮತ್,ಗಣೇಶ್ ಶೆಣೈ , ಗಣೇಶ ಕಿಣಿ ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.