ಈ ಸಂದರ್ಭದಲ್ಲಿ ಪೇಜಾವರ ಶ್ರೀಯವರ ಷಷ್ಠ್ಯಬ್ಧ ಪ್ರಯುಕ್ತ ಎಂ.ಹರಿಶ್ಚಂದ್ರರವರು ಶ್ರೀಪಾದರಿಗೆ ಅವರು ಮತ್ತು ಪ್ರಧಾನ ಮಂತ್ರಿಯವರನ್ನೊಳ ಗೊಂಡ ರಾಮಲಲ್ಲಾನ ಅಭೂತಪೂರ್ವ ತೈಲವರ್ಣ ಚಿತ್ರದ ಉಡುಗೊರೆಯನ್ನು ನೀಡಿದರು.
ಪಂಚಮಿ ಟ್ರಸ್ಟ್ ಮೂಲಕ ನಿರಂತರ ಸ್ವಚ್ಛತಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಕಲಿಕಾ ಪ್ರೋತ್ಸಾಹ, ಅಶಕ್ತರಿಗೆ ಸಹಾಯಧನ, ರಕ್ತದಾನ ಶಿಬಿರ , ಬಡವರಿಗೆ ಮನೆ ನಿರ್ಮಾಣ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳಿಂದ ಉಡುಪಿಯಲ್ಲಿ ಮನೆಮಾತಾಗಿರುವ ಗಾಂಧಿ ಆಸ್ಪತ್ರೆ ಆರೋಗ್ಯ ಸೇವೆಯೊಂದಿಗೆ ಸಮಾಜಮುಖಿ ಸೇವೆಯನ್ನೂ ನಡೆಸಿ ಕೊಂಡು ಬರುತ್ತಿರುವುದನ್ನು ಪೂಜ್ಯ ಶ್ರೀ ಪಾದರು ಉಲ್ಲೇಖಿಸಿ ಆಶೀರ್ವದಿಸಿದರು