ಉಡುಪಿ: ಕರಾವಳಿ ಭಾಗದಲ್ಲಿ ಮಳೆ, ನೆರೆ ಬಂದರೂ ಬೀಳದಂತಹ ಕಟ್ಟಡಗಳು ನಿರ್ಮಾಣವಾಗ ಬೇಕು. ಪರಿಸರ ಪೂರಕ ಕಟ್ಟಡಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿ.ಪಂ. ಸಿಇಒ ಡಾ| ನವೀನ್ ಭಟ್ ಹೇಳಿದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ಉಡುಪಿ ವತಿಯಿಂದ ಬುಧವಾರ ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್ನ 2ನೇ ಮಹಡಿಯಲ್ಲಿರುವ ಬ್ಯಾಂಕ್ವೆಟ್ ಹಾಲ್ನಲ್ಲಿ ಬುಧವಾರ ನಡೆದ ಎಂಜಿನಿಯರ್ಸ್ ಡೇ ಉದ್ಘಾಟಿಸಿ ಅವರು ಮಾತನಾಡಿದರು.
ಎಂಜಿನಿಯರಿಂಗ್ ಕ್ಷೇತ್ರದಲ್ಲಿ 30 ವರ್ಷಗಳಲ್ಲಿ ವಿನ್ಯಾಸ, ತಂತ್ರಜ್ಞಾನಗಳಲ್ಲಿ ಸಾಕಷ್ಟು ಬದ ಲಾವಣೆಗಳಾಗಿವೆ. ಎಂಜಿನಿಯರ್ ಗಳು ಕಾರ್ಮಿಕರ ಭದ್ರತೆಗೂ ಹೆಚ್ಚಿನ ಗಮನ ವಹಿಸಬೇಕು ಎಂದರು.
ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ವಾಸುದೇವ ರಾವ್, ಸ್ಕೂಬ್ ಇನ್ಫ್ರಾ ಸೊಲ್ಯುಶನ್ಸ್ನ ರಾಮಚಂದ್ರ, ಆರ್ಸಿಸಿ ಕಂಟ್ರಾಕ್ಟರ್ ಗುಂಡ್ಮಿ ಪರಮೇಶ್ವರ ಆಚಾರ್ ಅವರನ್ನು ಈ ಸಂದರ್ಭ ದಲ್ಲಿ ಸಮ್ಮಾನಿಸಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ ಎಂಜಿನಿಯರ್ ಶ್ರೀನಾಥ್ ಶೆಟ್ಟಿ ಮಾತನಾಡಿದರು. ಎಂಜಿನಿಯರ್ ಮಹೇಶ್ ಕಾಮತ್ ಅವರು ಅತಿಥಿಗಳನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ ನ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ಉಪಾಧ್ಯಕ್ಷ ಭಗವಾನ್ ದಾಸ್, ಕಾರ್ಯದರ್ಶಿ ಅಮಿತ್ ಅರವಿಂದ್, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.
ಅಧ್ಯಕ್ಷ ಎಂ.ಗೋಪಾಲ್ ಭಟ್ ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ಮತ್ತು ಯೋಗಿಶ್ಚಂದ್ರಾ ದರ್ ಕಾರ್ಯಕ್ರಮ ನಿರೂಪಿಸಿದರು.