ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ವತಿಯಿಂದ ವಿಪ್ರ ಮಹಿಳಾ ದಿನಾಚರಣೆ

ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಗುಂಡಿಬೈಲು ಬ್ರಾಹ್ಮೀ ಸಭಾಭವನದಲ್ಲಿ ‘ವಿಪ್ರ ಮಹಿಳಾ ದಿನಾಚರಣೆ’ ಯನ್ನು ಆಚರಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಮತ್ತು ಪಂಚಕರ್ಮ ಚಿಕಿತ್ಸಾ ತಜ್ಞರಾದ ಡಾ| ಸ್ವಾತಿ ಎನ್. ಭಟ್ ಇವರು “ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ” ಎಂಬ ವಿಷಯದ ಬಗ್ಗೆ ಮಾಹಿತಿ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ| ನಿರ್ಮಲಾ ಹರಿಕೃಷ್ಣ ಇವರು ಮಾತನಾಡಿ ಈಗಿನ ಪೀಳಿಗೆಯ ಮಕ್ಕಳಿಗೆ ಮತ್ತು ಯುವತಿಯರಿಗೆ ಧಾರ್ಮಿಕ ಪ್ರಜ್ಞೆ ಮತ್ತು ಸನಾತನ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವ ಮಾಹಿತಿ ಶಿಬಿರಗಳನ್ನು, ಉಪನ್ಯಾಸಗಳನ್ನು ಯುವ ಬ್ರಾಹ್ಮಣ ಪರಿಷತ್ತಿನಂತಹ ಸಂಘಟನೆಗಳು ಆಯೋಜಿಸುವ ಮೂಲಕ ಸದೃಢ ಸಮಾಜ ಕಟ್ಟುವಲ್ಲಿ ಶ್ರಮಿಸಬೇಕು ಎಂದು ಅಭಿಪ್ರಾಯ ಪಟ್ಟರು. ಇನ್ನೋರ್ವ ಮುಖ್ಯ ಅತಿಥಿ ನಗರಸಭಾ ಸದಸ್ಯರಾದ ಶ್ರೀಮತಿ ಅಮೃತಾ ಕೃಷ್ಣಮೂರ್ತಿಯವರು ಮಾತನಾಡಿ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವಿಪ್ರ ಸಾಧಕಿಯರಾದ ಡಾ|ವಿದುಷಿ ಉಷಾ ಚಡಗ (ದ್ವೆöÊತ ವೇದಾಂತ ವಿದ್ವಾಂಸರು), ಡಾ| ಗೀತಾ ಮಯ್ಯ (ಶಿಕ್ಷಣ ತಜ್ಞರು, ಮಣಿಪಾಲ), ಶಾಂತಾ ಗಣೇಶ್ ಕುಂಭಾಶಿ (ಸಮಾಜ ಸೇವೆ), ಡಾ| ಅದಿತಿ ರಾವ್(ಯುವ ಪ್ರತಿಭೆ) ಇವರನ್ನು ಸನ್ಮಾನಿಸಲಾಯಿತು. ಅರ್ಹ ಅಶಕ್ತರಿಗೆ ಮತ್ತು ವಿದ್ಯಾರ್ಜನೆಗೆ ರೂ.೩೦೦೦೦/- ಸಹಾಯಧನ ಹಸ್ತಾಂತರಿಸಲಾಯಿತು. ಪರಿಷತ್ತಿನ ಸದಸ್ಯರಾದ ಆಶಾ ರಘುಪತಿ ರಾವ್, ಸವಿತಾ ಶಶಿಧರ್, ದಿವ್ಯಾ ವಿಷ್ಣುಪ್ರಸಾದ್, ವಿಜಯಾ ರವಿ ಪ್ರಕಾಶ್, ಸುರೇಖ ಭಟ್, ರೇಣುಕಾ ಮತ್ತು ಶಶಿಪ್ರಭಾ ವಿವೇಕಾನಂದ ಅತಿಥಿಗಳನ್ನು ಮತ್ತು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಕೋಶಾಧಿಕಾರಿ ಕುಮಾರ ಸ್ವಾಮಿ ಉಡುಪ ಪರಿಷತ್ತಿಗೆ ಸೇರ್ಪಡೆ ಹೊಂದಿದ ನೂತನ ಮಹಿಳಾ ಸದಸ್ಯರ ವಿವರವನ್ನು ನೀಡಿದರು. ಉಪಾಧ್ಯಕ್ಷೆ ಪದ್ಮಲತಾ ವಿಷ್ಣು ಸ್ವಾಗತಿಸಿ, ಅಧ್ಯಕ್ಷ ಚೈತನ್ಯ ಎಂ.ಜಿ. ಪ್ರಸ್ತಾವನೆ ಗೈದರು. ಪೂರ್ಣಿಮಾ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ವಿವೇಕಾನಂದ ಎನ್. ವಂದನಾರ್ಪಣೆಗೈದರು. ಸಭಾ ಕಾರ್ಯಕ್ರಮದ ನಂತರ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.

 
 
 
 
 
 
 
 
 
 
 

Leave a Reply