ಯಕ್ಷ ಸಮೃದ್ಧಿ 2022ರಲ್ಲಿ ಪಟ್ಲ ಹಾಗು ಚಂದ್ರಕಾಂತ್ ರವರಿಗೆ ಗೌರವಾಭಿನಂದನೆ

ಯಕ್ಷ ಸೌರಭ ಪೆರ್ಡೂರು ಅರ್ಪಿಸುವ ಯಕ್ಷ ಸಮೃದ್ಧಿ 2022 ಕಾರ್ಯಕ್ರಮದನ್ವಯ ಪೆರ್ಡೂರಿನಲ್ಲಿ ನಡೆಯುತ್ತಿರುವ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಖ್ಯಾತ ಭಾಗವತರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ಸ್ಥಾಪಕಾಧ್ಯಕ್ಷರು ಪಟ್ಲ ಸತೀಶ್ ಶೆಟ್ಟಿ ಮತ್ತು ಸಾಲಿಗ್ರಾಮ ಮೇಳದ ಭಾಗವತರು ಮೂಡುಬೆಳ್ಳೆ ಚಂದ್ರಕಾಂತ್ ರಾವ್ ಇವರನ್ನು ಆರು ಮೇಳಗಳ ಸಂಚಾಲಕರು ಪಳ್ಳಿ ಕಿಶನ್ ಕುಮಾರ್ ಹೆಗ್ಡೆ, ಪತ್ರಕರ್ತರು ವಸಂತ್ ಗಿಳಿಯಾರ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಅಧ್ಯಕ್ಷರ ನೆಲೆಯಲ್ಲಿ ಪಳ್ಳಿ ಕಿಶನ್’ಕುಮಾರ್ ಹೆಗ್ಡೆಯವರು ಮಾತಾಡಿ ಕಲಾವಿದರ ಆಶಾಕಿರಣವಾಗಿರುವ ಪಟ್ಲ ಸತೀಶ್ ಶೆಟ್ಟಿಯವರ ಯಕ್ಷಧ್ರುವ ಪಟ್ಲ ಫೌಂಡೇಶನ್ ನಡೆಸುತ್ತಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

 
 
 
 
 
 
 
 
 
 
 

Leave a Reply