ವಿಶ್ವಕರ್ಮ ಸೇವಾ ಸಂಘ (ರಿ). ಚಿಟ್ಪಾಡಿ, ಮಂಚಿ,ಉಡುಪಿ ; ಕರಾಟೆ ತರಬೇತಿ

ವಿಶ್ವಕರ್ಮ ಸೇವಾ ಸಂಘ (ರಿ). ಚಿಟ್ಪಾಡಿ, ಮಂಚಿ,ಉಡುಪಿ.
ಇವರ ಸಹಯೋಗದೊಂದಿಗೆ ಬುಡ ಕಾನ್ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ವತಿಯಿಂದ ಕರಾಟೆ ತರಬೇತಿ ಉದ್ಘಾಟನಾ ಸಮಾರಂಭ ದಿನಾಂಕ 26/2/2022 ಭಾನುವಾರ ವಿಶ್ವಕರ್ಮ ಸೇವಾ ಸಂಘ (ರಿ). ಚಿಟ್ಪಾಡಿ, ಮಂಚಿ, ಉಡುಪಿ ಇದರ ಸಂಘದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಸುಧಾಕರ್ ಆಚಾರ್ಯ. ಗೌರವ ಸಲಹೆಗಾರರಾದ ಭಾಸ್ಕರ್ ಆಚಾರ್ಯ.ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಕಾಳಿಕಾಂಬ ಮಹಿಳಾ ಸಂಘದ ಅಧ್ಯಕ್ಷರಾದ ಯಶೋಧ, ಉಡುಪಿ ಕರಾಟೆ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರವಿ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ರೋಹಿತಾಕ್ಷ ಉದ್ಯಾವರ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪ ಡಿ ಕಿಣಿ, ಖ್ಯಾತ ಉದ್ಯಮಿಗಳಾದ ಮರವಂತೆ ನಾಗರಾಜ್ ಹೆಬ್ಬಾರ್ ಹಾಗೂ ಪ್ರಶಾಂತ್ ಕಾಮತ್. ಸ್ವಾಗತವನ್ನು ಶ್ರೀಮತಿ ನಂದಿನಿ ಯವರು ನೆರವೇರಿಸಿಕೊಟ್ಟರು. ಧನ್ಯವಾದವನ್ನು ಕರಾಟೆ ಶಿಕ್ಷಕಿಯಾದ ರೋಶನಿ ರವರು ನೆರವೇರಿಸಿಕೊಟ್ಟರು. ಕರಾಟೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಘದ ಎಲ್ಲಾ ಪದಾಧಿಕಾರಿಗಳು ಸರ್ವ ಸದಸ್ಯರು ಹಾಜರಿದ್ದರು.

ಮಾರ್ಚ್ ಐದರಿಂದ ಶನಿವಾರ ಮತ್ತು ಭಾನುವಾರ ಸಂಜೆ 5:00 ಗಂಟೆಗೆ ತರಗತಿಗಳು ಪ್ರಾರಂಭವಾಗಲಿದೆ.

 
 
 
 
 
 
 
 
 
 
 

Leave a Reply