ಉಡುಪಿ : ಕಳೆದ ಅನೇಕ ವರ್ಷಗಳಿಂದ ಸರಕಾರಿ ಜಾಗವನ್ನು ಅತಿಕ್ರಮಣ ಮಾಡುವ ಉದ್ದೇಶದಿಂದ ಅನಧಿಕೃತವಾಗಿ ಕಟ್ಟಡವನ್ನು ಕಟ್ಟಿಕೊಂಡು ತಮ್ಮದೇ ಜಾಗ ಎಂದು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಾ ಬಂದಿತ್ತು. ಇದನ್ನು ವಿರೋಧಿಸಿ ಆ ಗ್ರಾಮಸ್ಥರು ಇದು ಸರಕಾರದ ಜಾಗ ಎಂದು ಹೋರಾಟ ನಡೆಸಿ ಒಂದು ಹಂತದ ವಿಜಯ ದೊರಕಿತು.
ಆದರೆ ಇದನ್ನು ಗಮನಿಸಿದ ಕೆಲವರು ವಿಜಯ್ ಕೊಡವೂರು ರನ್ನು ಜೀವಂತವಾಗಿ ಬಿಡುವುದಿಲ್ಲ, ಇವರನ್ನು ಸಾಯಿಸುತ್ತವೆ ಎಂದು ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.ಇದಕ್ಕೆ ಪೂರಕವಾಗಿ ಊರಿನ ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಮಲ್ಪೆ ಠಾಣೆಯಲ್ಲಿ ಮತ್ತು ಉಡುಪಿ ಎಸ್.ಪಿಗೆ ದೂರನ್ನು ದಾಖಲಿಸಿದ್ದರು.
ಸೋಮವಾರ ಕೊಡವೂರು ಗ್ರಾಮದ/ದೇವಸ್ಥಾನ ಹಾಗೂ ಎಲ್ಲಾ ಮುಖಂಡರು ಸೇರಿಕೊಂಡು ಈ ಹೋರಾಟಕ್ಕೆ ಮತ್ತಷ್ಟು ಪುಷ್ಟಿಯನ್ನು ಕೊಟ್ಟು ಯಾವುದೇ ಕಾರಣಕ್ಕೆ ಕೊಡವೂರಿನ ಶಾಂತಿಯುತವಾದ ಪರಿಸರದಲ್ಲಿ ಅಹಿತಕರ ಘಟನೆ ನಡೆಯಬಾರದು, ಹಾಗೂ ಈ ಜಾಗ ಸರಕಾರಕ್ಕೆ ಸೇರಬೇಕು ಮತ್ತು ವಿಜಯ್ ಕೊಡವೂರು ಗೆ ಬೆದರಿಕೆ ಹಾಕಿರುವುದನ್ನು ನಾವು ಖಂಡಿಸುತ್ತೇವೆ ಎಂದರು. ಯಾವುದೇ ರೀತಿಯ ಲಂಚ ಇಲ್ಲದೆ, ಜಾತಿ ಬೇಧ ಇಲ್ಲದೆ, ಪಕ್ಷ ಬೇಧ ಇಲ್ಲದೆ ಕೆಲಸ ಮಾಡುವ ಇವರ ಜೊತೆಗೆ ನಾವು ಇದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.