ಉಡುಪಿ : ಟಿ.ಎಂ.ಎ.ಪೈ.ಪ್ರೌಢ ಶಾಲೆಯಲ್ಲಿ ಏಸ್ ಸಂಸ್ಥೆಯ ಗಣಿತಶಾಸ್ತ್ರ ಕಾರ್ಯಾಗಾರ

ಉಡುಪಿ : 9,10,ಪಿಯುಸಿ,ಸಿ.ಇ.ಟಿ, ಜೆ.ಇ.ಇ,ನೀಟ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಟ ಫಲಿತಾಂಶ ಗಳಿಸುತ್ತಿರುವ ಆಚಾರ್ಯಾಸ್ ಏಸ್ ವತಿಯಿಂದ ಒಂಬತ್ತನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಗಣಿತದ ಪ್ರಶ್ನೆಗಳನ್ನು ಸುಲಭ ರೀತಿಯಲ್ಲಿ ಪರಿಹರಿಸುವ ಕುರಿತು ವಿಶೇಷ ಕಾರ್ಯಾಗಾರ ಜರಗಿತು.

ಉಡುಪಿ ಕುಂಜಿಬೆಟ್ಟು ಟಿ.ಎಂ.ಎ.ಪೈ ಇಂಗ್ಲಿಷ್ ಮೀಡಿಯಂ.ಪ್ರೌಢಶಾಲೆ ಯಲ್ಲಿ ಜರಗಿದ ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಚಾರ್ಯಾಸ್ ಏಸ್ ಸಂಸ್ಥೆಯ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪಾಲ್ಗೊಂಡಿದ್ದರು.ಗಣಿತದ ಪ್ರಮುಖ ಪ್ರಶ್ನೆಗಳನ್ನು ಕನಿಷ್ಟ ಅವಧಿಯಲ್ಲಿ ಪರಿಹರಿಸುವ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಅಲ್ಲದೇ ಆತ್ಮವಿಶ್ವಾಸದ ಕೊರತೆಯನ್ನು ಹೇಗೆ ನೀಗಿಸಿಕೊಳ್ಳಬಹುದು ಮತ್ತು ಮಿದುಳಿನ ವಿಶೇಷ ಸಾಮರ್ಥ್ಯದ ಕುರಿತಾಗಿ ಸೂಕ್ತ ಉದಾಹರಣೆಗಳೊಂದಿಗೆ ವಿಶೇಷ ಉಪನ್ಯಾಸ ನಡೆಸಿದರು.

ಏಸ್ ಸಂಸ್ಥೆಯವರು ಸಿದ್ದಪಡಿಸಿರುವ ವಿಜ್ಞಾನ ಹಾಗೂ ಗಣಿತ ಪರೀಕ್ಷೆಯಲ್ಲಿ ಗರಿಷ್ಟ ಅಂಕಗಳಿಸಲು ಬಹುವಿಧದಲ್ಲಿ ಸಹಕರಿಸುವ ವಿಜ್ಞಾನ ಮತ್ತು ಗಣಿತದ ಫಾರ್ಮುಲಾ ಕೃತಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು. ಟಿ.ಎಂ.ಎ.ಪೈ ಇಂಗ್ಲೀಷ ಮೀಡಿಯಂ ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ ಸರ್ ಹಾಗೂ ಏಸ್ ಸಂಸ್ಥೆಯ ಪಿ.ಲಾತವ್ಯ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಾಗಾರ ಕುರಿತು ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕಪೇಟೆಯ ವೆಂಕಟ್ರಮಣ ದೇವಾಲಯದ ಮುಂಭಾಗದ ರಾಧೇಶ್ಯಾಮ ಕಟ್ಟಡ ಅಥವಾ ಹಾಗೂ ಬ್ರಹ್ಮಾವರದ ಮಧುವನ ಸಂಕೀರ್ಣದಲ್ಲಿರುವ ಆಚಾರ್ಯಾಸ್ ಏಸ್ ಸಂಸ್ಥೆಯನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಪಿ.ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply