ಉಡುಪಿ : ಸಸಿಹಿತ್ಲು,ಬಪ್ಪನಾಡು,ತಲಕಳ ಮತ್ತು ಬೆಂಕಿನಾಥೇಶ್ವರ ಮೇಳಗಳಲ್ಲಿ20 ವರ್ಷಗಳ ಕಾಲ ಸ್ತ್ರೀ ವೇಷಧಾರಿಯಾಗಿ ಕಲಾಸೇವೆಗೈದು ಜನವರಿ 31ರಂದು ಅಕಾಲಿಕ ನಿಧನರಾದ ಸುರೇಶ್ ಶೆಟ್ಟಿ (44ವರ್ಷ) ಅವರ ಪತ್ನಿ ವಿದ್ಯಾರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ರೂಪಾಯಿ ಐವತ್ತು ಸಾವಿರದ ಸಾಂತ್ವನ ನಿಧಿಯನ್ನು ಮಂಗಳೂರಿನ ಯೆಯ್ಯಾಡಿಯಲ್ಲಿರುವ ಅವರ ಮನೆಗೆ ಹೋಗಿ ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಹಸ್ತಾಂತರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಾಂತ್ವನದ ಮಾತಾಡಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಪ್ರೊ. ನಾರಾಯಣ ಎಮ್. ಹೆಗಡೆ, ಡಾ. ಪೃಥ್ವಿರಾಜ್ ಕವತ್ತಾರ್,ಕಿಶೋರ್ ಸಿ.ಉದ್ಯಾವರ ಉಪಸ್ಥಿತರಿದ್ದರು.