ಯೋಗಬಾಲೆ ತನುಶ್ರೀ ಪಿತ್ರೋಡಿಯ ತನು ಯೋಗ ಭೂಮಿಯ 50 ನೇ ಪ್ರದರ್ಶನ

ಉಡುಪಿಯ ಯೋಗಬಾಲೆ ಹಲವು ವಿಶ್ವದಾಖಲೆಗಳ ಸಾಧಕಿ ತನುಶ್ರೀ ಪಿತ್ರೋಡಿಯ ತನು ಯೋಗ ಭೂಮಿಯ 50 ನೇ ಪ್ರದರ್ಶನ ಇಂದಿರಾನಗರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಿತು ಇದುವರೆಗೆ ಉಡುಪಿ ದಕ್ಷಿಣ ಕನ್ನಡ ಮತ್ತು ವಿಜಯಪುರದ ೧೫೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ನೋಡಿದ್ದಾರೆ. ಯೋಗ ಮತ್ತು ದೇಶದ ಸಂಸ್ಕೃತಿ ಕುರಿತಾದ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ಇದಾಗಿದೆ.

50ನೇ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಾಧಕರಾದ ರಾಜ್ ಕುಮಾರ್ ಬೆಹ್ರೈನ್ ,ನಿವೃತ್ತ ಶಿಕ್ಷಕ ವಿಶ್ವನಾಥ ಬಾಯಿರಿ, ಪ್ರಾಧ್ಯಾಪಕ ದೇವೀ ಪ್ರಸಾದ್ ಅದಮಾರು , ದಿನೇಶ್ ಭಟ್ ,ಸೋಮಶೇಖರ್ ,ರಾಕೇಶ್ ಕಟಪಾಡಿ, ಪ್ರಜ್ಞಾ ಕುರ್ಕಾಲು ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆಯ ಸ್ಥಾಯಿಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಸಿಸಿಲೀಸ್ ಶಾಲೆಯ ಪ್ರೀತಿ ಕ್ರಾಸ್ತಾ, ರಾಮಕೃಷ್ಣ ಕೊಡಂಚ, ಶ್ರೀಧರ್ ದೇವಾಡಿಗ ಶಿಕ್ಷಕರಾದ ಗಿರೀಶ್ ಎ ನಾಯ್ಕ್ ಗಾಯತ್ರಿ, ಕೃಷ್ಣ ಕುಲಾಲ್ ವಿಜಯ್ ಕುಮಾರ್ ಸುರಭಿ ರತನ್ ಮೊದಲಾದವರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply