ಉಡುಪಿಯ ಯೋಗಬಾಲೆ ಹಲವು ವಿಶ್ವದಾಖಲೆಗಳ ಸಾಧಕಿ ತನುಶ್ರೀ ಪಿತ್ರೋಡಿಯ ತನು ಯೋಗ ಭೂಮಿಯ 50 ನೇ ಪ್ರದರ್ಶನ ಇಂದಿರಾನಗರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಿತು ಇದುವರೆಗೆ ಉಡುಪಿ ದಕ್ಷಿಣ ಕನ್ನಡ ಮತ್ತು ವಿಜಯಪುರದ ೧೫೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ನೋಡಿದ್ದಾರೆ. ಯೋಗ ಮತ್ತು ದೇಶದ ಸಂಸ್ಕೃತಿ ಕುರಿತಾದ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ಇದಾಗಿದೆ.
50ನೇ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಸಾಧಕರಾದ ರಾಜ್ ಕುಮಾರ್ ಬೆಹ್ರೈನ್ ,ನಿವೃತ್ತ ಶಿಕ್ಷಕ ವಿಶ್ವನಾಥ ಬಾಯಿರಿ, ಪ್ರಾಧ್ಯಾಪಕ ದೇವೀ ಪ್ರಸಾದ್ ಅದಮಾರು , ದಿನೇಶ್ ಭಟ್ ,ಸೋಮಶೇಖರ್ ,ರಾಕೇಶ್ ಕಟಪಾಡಿ, ಪ್ರಜ್ಞಾ ಕುರ್ಕಾಲು ಇವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆಯ ಸ್ಥಾಯಿಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಸಿಸಿಲೀಸ್ ಶಾಲೆಯ ಪ್ರೀತಿ ಕ್ರಾಸ್ತಾ, ರಾಮಕೃಷ್ಣ ಕೊಡಂಚ, ಶ್ರೀಧರ್ ದೇವಾಡಿಗ ಶಿಕ್ಷಕರಾದ ಗಿರೀಶ್ ಎ ನಾಯ್ಕ್ ಗಾಯತ್ರಿ, ಕೃಷ್ಣ ಕುಲಾಲ್ ವಿಜಯ್ ಕುಮಾರ್ ಸುರಭಿ ರತನ್ ಮೊದಲಾದವರು ಉಪಸ್ಥಿತರಿದ್ದರು