ವಿಶೇಷ ಚೇತನ ವ್ಯಕ್ತಿಯೊರ್ವರಿಗೆ ಸೀಟು ಬಿಟ್ಟುಕೊಡುವಂತೆ ಹೇಳಿದ್ದಕ್ಕೆ ಪ್ರಯಾಣಿಕನೋರ್ವ ಬಸ್ ನಿರ್ವಾಹಕಿಗೆ ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ಮಹಿಳಾ ಠಾಣೆಯಲ್ಲಿ ಫೆ 20 ರಂದು ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದಾತ ಅಪ್ರಾಪ್ತ ಎಂದು ತಿಳಿದು ಬಂದಿದೆ. ಪುತ್ತೂರು ಮುಖ್ಯ ರಸ್ತೆಯ ಬೊಳ್ವಾರು ಸಮೀಪ ಹಲ್ಲೆ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಕೆಎಸ್ ಅರ್ ಟಿಸಿ ಬಸ್ಸು ನಿರ್ವಾಹಕಿ ವಿಜಯ ಹಲ್ಲೆಯಿಂದ ಗಾಯಗೊಂಡವರು ಅವರು ಆಸ್ಫತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಬಸ್ಸಿನಲ್ಲಿ ವಿಕಲಾಂಗ ವ್ಯಕ್ತಿಯೊರ್ವರು ನಿಂತು ಪ್ರಯಾಣಿಸುತ್ತಿದ್ದು, ಇದನ್ನು ಗಮನಿಸಿದ ನಿರ್ವಾಹಿಕಿ ವಿಜಯ ಅವರು ಕೂತು ಪ್ರಯಾಣಿಸುತ್ತಿದ್ದ ಯುವಕನ ಬಳಿ ನಿರ್ವಾಹಕಿ ಹೇಳಿದ್ದಾರೆ ಎನ್ನಲಾಗಿದೆ . ಇದಕ್ಕೆ ಆ ಯುವಕ ಆಕ್ಷೇಪಿಸಿದ್ದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಯುವಕ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆಂದು ನಿರ್ವಾಹಕಿ ಆರೋಪಿಸಿದ್ದಾರೆ.
ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೆಎಸ್ಆರ್ ಟಿಸಿ ಮಜ್ದೂರ್ ಸಂಘ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಹಲ್ಲೆ ನಡೆಸಿದಾತ ಅಪ್ರಾಪ್ತ ಎಂದು ತಿಳಿದು ಬಂದಿದ್ದು, ಆತನನ್ನು ಇನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.