ಪಠ್ಯಕ್ರಮದಲ್ಲಿ ಭಗವದ್ಗೀತೆ ಸರಕಾರದ ಶ್ರೇಷ್ಠ ನಿರ್ಧಾರ: ಬೈಕಾಡಿ ಸುಪ್ರಸಾದ್ ಶೆಟ್ಟಿ

ರಾಜ್ಯದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ರಾಜ್ಯ ಸರಕಾರದ ತೀರ್ಮಾನ ಶ್ರೇಷ್ಠ ನಿರ್ಧಾರ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಶ್ಲಾಘಿಸಿದ್ದಾರೆ. ಭಗವದ್ ಗೀತೆ ಜಗತ್ತಿನ ಸಾಹಿತ್ಯದ ಶ್ರೇಷ್ಠ ಕೃತಿ ,ಭಗವದ್ಗೀತೆ ಶಾಶ್ವತ ಜೀವಂತದ ಅಭಿವ್ಯಕ್ತಿ ಮತ್ತು ವ್ಯಾಖ್ಯಾನ ,ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಅದನ್ನ ಅರ್ಥೈಸಿಕೊಂಡಾಗ ನಿಜವಾದ ಭಾರತದೊಡನೆ ,ಪ್ರಾಚೀನ ಭಾರತದೊಡನೆ, ಶಾಶ್ವತ ಭಾರತದೊಡನೆ ಭಾವನಾತ್ಮಕವಾದ ಸಂಪರ್ಕವಾಗುತ್ತದೆ .ಭಗವದ್ ಗೀತೆಯ ಅಧ್ಯಯನದಿಂದ ಆಧುನಿಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೌದ್ಧಿಕ ಮತ್ತು ನೈತಿಕ ಪರಿವರ್ತನೆಯ ಜತೆಗೆ ಪ್ರಾಮಾಣಿಕತೆಯನ್ನ ಮೂಡಿಸುತ್ತದೆ. ಕರ್ನಾಟಕ ರಾಜ್ಯದ ದಿಟ್ಟ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

 
 
 
 
 
 
 
 
 
 
 

Leave a Reply