ಕಳಸ, ಹೊರನಾಡು ಭಾಗದ ಜನರ ಬಹು ವರ್ಷಗಳ ಬೇಡಿಕೆ ಸಾಕಾರ- ಕಳಸ ನೂತನ ತಾಲೂಕು ಘೋಷಣೆ

ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ, ಕಳಸ, ಹೊರನಾಡು ಭಾಗದ ಜನರ ಬಹು ವರ್ಷಗಳ ಬೇಡಿಕೆಯಾದ ‘ಕಳಸ’ ನೂತನ ತಾಲೂಕಾಗಿ ಘೋಷಣೆಗೊಂಡಿದೆ.

ಕ್ಷೇತ್ರದ ಜನರ ಬೇಡಿಕೆಯನ್ನು ವರುಷದ ಹಿಂದೆ ಮುಖ್ಯಮಂತ್ರಿಗಳ ಗಮನಕ್ಕೆ ಪತ್ರ ಮುಖೇನ ತರಲಾಗಿತ್ತು.ಈ ಮನವಿಯನ್ನು ಪುರಸ್ಕರಿಸಿ ಬಿ ಎಸ್ ಯಡಿಯೂರಪ್ಪನವರು ನೂತನ ಕಳಸ ತಾಲೂಕನ್ನು ಘೋಷಣೆ ಮಾಡಿದ್ದಾರೆ.

ಕ್ಷೇತ್ರದ ಜನರ ಬಹು ನಿರೀಕ್ಷಿತ ಬೇಡಿಕೆಯನ್ನು ಸಾಕರಾಗೊಳಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ನೂತನ ಕಳಸ ತಾಲೂಕಿನ ಸಮಸ್ತ ಜನರ ಪರವಾಗಿ ಧನ್ಯವಾದಗಳನ್ನು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply