​ರಾಜ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ​

ಬೆಂಗಳೂರು: ಈಗಾಗಲೇ ವಿಸ್ತರಣೆಯಾಗಬೇಕಿದ್ದ  ಸಚಿವ ಸಂಪುಟ ವಿವಿಧ ಕಾರಣಗಳಿಗಾಗಿ‌ ವಿಳಂಬವಾಗಿತ್ತು.ಇದೀಗ ಸಂಪುಟ ವಿಸ್ತರಣೆ ದಿನಗಳು ಹತ್ರಿರವಾಗಿದ್ದು, ಆರ್ ಆರ್ ನಗರ, ಶಿರಾ ವಿಧಾನಸಭೆ‌ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ದೆಹಲಿಗೆ ತೆರಳಲು ನಿರ್ಧಾರ ಮಾಡಿದ್ದಾರೆ.

ಪಕ್ಷದ ನಗರ ಕಚೇರಿಯಲ್ಲಿ ವರ್ಚುವಲ್ ರಾಲಿ ಬಳಿಕ ಶನಿವಾರ ಮಾಧ್ಯಮಗಳೊಂದಿಗೆ ಬಿಎಸ್ ವೈ ಮಾತನಾಡಿ,‌ ಚುನಾವಣೆ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಆಲೋಚಿಸಿದ್ದೇನೆ. ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ‌ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎನ್ನುವುದು ಖಚಿತವಾಗಲಿದೆ ಎಂದು ಹೇಳಿ, ಭರವಸೆ ನೀಡಿದ ಎಲ್ಲರಿಗೂ ಮಂತ್ರಿ ಸ್ಥಾನ ನೀಡಲಾಗುವುದು ಎಂದಿದ್ದಾರೆ.

ಇನ್ನು ಆರ್ ಆರ್ ನಗರದ ಉಪ ಚುನಾವಣೆಯ ಕುರಿತು ಮಾತನಾಡಿ, ಮುನಿರತ್ನ ಗೆದ್ದು ಸಚಿವರಾಗುವುದು ಖಂಡಿತ. ಶಿರಾ ಕ್ಷೇತ್ರದಲ್ಲಿ ಈ ಬಾರಿ ಆಶ್ಚರ್ಯಕರ ಫಲಿತಾಂಶ ಹೊರ ಬೀಳಲಿದೆ. ಮುನಿರತ್ನ ಅವರು 25,000 ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply