ಶಂಕರನಾರಾಯಣ: ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಉದ್ಘಾಟನೆ

ತಾರೀಕು 07.09.2022ನೇ ಬುಧವಾರ ಹೋಬಳಿ ಕೇಂದ್ರವಾಗಲು ಹವಣಿಸುತ್ತಿರುವ ಶಂಕರನಾರಾಯಣ ದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಕಾಲೇಜು ರಸ್ತೆಯ ಆಧ್ಯಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ವೃತ್ತದ ಮಹಾ ಪ್ರಬಂಧಕ (ಸಿ.ಜಿ. ಎಂ) ನಂದ ಕಿಶೋರ್ ದೀಪ ಬೆಳಗುವ ಮೂಲಕ ಶಾಖೆಯನ್ನು ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಈ ಬ್ಯಾಂಕಿನಿಂದ ಗ್ರಾಹಕರಿಗೆ ಹೆಚ್ಚಿನ ಸವಲತ್ತು ಸಿಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಬೆಂಗಳೂರು ಅನುರಾಗ್ ಜೋಶಿ,ಡೆಪ್ಯೂಟಿ ಜನರಲ್ ಮೇನೇಜರ್ ಜೋಬಿ ಜೋಸ್, ರೀಜನಲ್ ಮ್ಯಾನೇಜರ್ ಸುನಿಲ್.ಆರ್. ಪರಾಂಜಪೆ, ಶಾಖಾಧಿಕಾರಿ ಉಮೇಶ್, ಆಫೀಸರ್ ಪ್ರವೀಣ್ ಆಚಾರ್, ಕಟ್ಟಡದ ಮಾಲೀಕ ಉದಯ ಶೆಟ್ಟಿ ಉಪಸ್ಥಿತರಿದ್ದರು. ಕಟ್ಟಡದ ಮಾಲೀಕ ಉದಯ ಶೆಟ್ಟಿ ದಂಪತಿಗಳನ್ನುಹಾಗೂ ಇಂಜಿನೀರ್ ಪ್ರವೀಣ್ ಶೆಟ್ಟಿ ಇವರನ್ನು ಬ್ಯಾಂಕಿನ ವತಿಯಿಂದ
ಸನ್ಮಾನಿಸಲಾಯಿತು.

ಊರಿನ ಪ್ರಮುಖರಾದ ಶಂಕರನಾರಾಯಣ ದೇಗುಲ ಮುಕ್ತೇಶ್ವರ ಲಕ್ಷ್ಮಿ ನಾರಾಯಣ ಉಡುಪ,ವಿಶ್ವನಾಥ ಶೆಟ್ಟಿ, ಶಂಕರನಾರಾಯಣ ತಾ.ಹೋ.ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಹೋರಾಟ ಸಮಿತಿ ಅಧ್ಯಕ್ಷ ಆವರ್ಸ್ಯೇ ರತ್ನಾಕರ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ,ಸುಬ್ರಾಯ ಕಿಣಿ,ಚಂದ್ರಹಾಸ ಹೆಗ್ಡೆ,ದೇವೇಂದ್ರ ನಾಯಕ,ದಿನೇಶ್ ಶೆಟ್ಟಿ,ಶ್ರೀಕಾಂತ್ ಉಡುಪ,ಬಲಗದ್ದೆ ಉದಾಯಕುಮಾರ ಶೆಟ್ಟಿ, ಸ.ಪ್ರ.ಕಾಲೇಜು ಪ್ರಾಂಶುಪಾಲ, ಉಪಾನ್ಯಾಸಕರು, ವಿದ್ಯಾರ್ಥಿಗಳು ಆಗಮಿಸಿ ಶುಭ ಹಾರೈಸಿದರು.

 
 
 
 
 
 
 
 
 
 
 

Leave a Reply