ಜ್ಞಾನ ಗಂಗಾ ಪಿಯು ಕಾಲೇಜ್ ವತಿಯಿಂದ ವೈದ್ಯಕೀಯ ಸಹಾಯಾರ್ಥ ಸಂಗ್ರಹಿಸಿದ ಹಣ ಹಸ್ತಾಂತರ

ಜ್ಞಾನ ಗಂಗಾ ಪಿಯು ಕಾಲೇಜ್ ಕುಂತಳನಗರ ಇವರ ಎನ್ ಎಸ್ ಎಸ್ ಘಟಕದ ವತಿಯಿಂದ ವೈದ್ಯಕೀಯ ಸಹಾಯಾರ್ಥ ಸಂಗ್ರಹಿಸಿದ ಸುಮಾರು 88ಸಾವಿರ ಮೊತ್ತವನ್ನು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿ ಕಾಲೇಜಿನ ಪ್ರಾಂಶುಪಾಲರಾಗಿ ಎಲ್ಲ ಅಧ್ಯಾಪಕ ವ್ರಂದ, ವಿದ್ಯಾರ್ಥಿಗಳು, ಆಡಳಿತ ಮಂಡಳಿ ಇವರೆಲ್ಲರಿಗೂ ಧನ್ಯವಾದಗಳು. ದೇವತಾ ಕಾರ್ಯನಡೆಸಲು ಸಹಕಾರ ನೀಡಿದ ಪ್ರಾಂಶುಪಾಲರ ಮತ್ತು ಎಲ್ಲ ಅಧ್ಯಾಪಕ ವ್ರಂದದವರಿಗೆ ಧನ್ಯವಾದ ಸಲ್ಲಿಸಿದೆನು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮೂಡಿ ಸಮಾಜದ ಸಂಕಷ್ಟಗಳಿಗೆ ಸ್ಪಂದಿಸಲು ಪಾಠವಾಗಿದೆ ಎಂದು ಎಲ್ಲರಿಗೂ ಶುಭಕೋರಿದೆನು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಕಾಲೇಜಿನ ಸತ್ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ಳೆ ಪಂಚಾಯತ್ ಅಧ್ಯಕ್ಷರಾದ ಸುಧಾಕರ ಪೂಜಾರಿ, ಶಿರ್ವ ಆರಕ್ಷಕ ಠಾಣಾಧಿಕಾರಿ ರಾಘವೇಂದ್ರ, ಪ್ರಾಂಶುಪಾಲರು, ಆಡಳಿತ ಮಂಡಳಿಯವರು, ಅಧ್ಯಾಪಕವ್ರಂದ ಕಾಲೇಜಿನ ಹಿತೈಷಿಗಳು ಉಪಸ್ಥಿತರಿದ್ದರು. ಕಾಲೇಜಿನ ಹಂತದಲ್ಲಿಯೇ ಮಕ್ಕಳನ್ನು ಸಮಾಜಮುಖಿಯನ್ಮಾಗಿಸುವ ಕಾಲೇಜಿನ ಪ್ರಯತ್ನ ನಿಜವಾಗಿಯೂ ಪ್ರಶಂಸನೀಯ. ಶ್ರೀಕಾಂತ ನಾಯಕ್
ಅಧ್ಯಕ್ಷರು ಬಿಜೆಪಿ ಕಾಪು ಕ್ಷೇತ್ರ.

 
 
 
 
 
 
 
 
 
 
 

Leave a Reply