ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲಾ ಕಚೇರಿಯಲ್ಲಿ ಪ್ರಮೋದ್ ಮುತಾಲಿಕ್  ಪ್ರತ್ಯಕ್ಷ 

ಶ್ರೀ ರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರು ಶ್ರೀ ಪ್ರಮೋದ್ ಮುತಾಲಿಕ್ ಅವರು ನಿರ್ಬಂಧದ ಮದ್ಯೆಯು ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯ ಕಚೇರಿಗೆ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣನವರು ಬೆಳಗಾವಿ ಜಿಲ್ಲೆಗಷ್ಟೆ ಸೀಮಿತವಲ್ಲ ಎಂಬ ನಿಟ್ಟಿನಲ್ಲಿ ಸಿದ್ದಬಸಯ್ಯ ಸ್ವಾಮಿ ಅವರು ಅಭಿಮಾನಿ ಬಳಗವನ್ನ ಕಟ್ಟಿಕೊಂಡು ಮಾಡುತ್ತಿರುವ ಹೋರಾಟ ನಿಜಕ್ಕೂ ಅಭಿನಂದನಾರ್ಹ.  ಅವರಿಗೆ ಶ್ರೀರಾಮ ಸೇನೆ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇನೆ. 
ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಯ ಮನೆಮನೆಗೂ ರಾಯಣ್ಣನ ಆದರ್ಶ ತತ್ವಗಳನ್ನು ತಿಳಿಸುವಂತಹ ಕಾರ್ಯ ಅವರಿಂದ ಆಗಲಿ ಎಂದು ಆಶಿಸುತ್ತಾ, ಯಾವ ವೃತ್ತಕ್ಕೆ ಮನವಿ ನೀಡಿ ಹೋರಾಟ ಮಾಡುತ್ತಿದ್ದಾರೋ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.  ದಯವಿಟ್ಟು ಇಲ್ಲಿಯ ಅಧಿಕಾರಿಗಳು ಇದಕ್ಕೆ ಸ್ಪಂದಿಸಿ ರಾಯಣ್ಣನಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಉಪಾಧ್ಯಕ್ಷ ಈರಪ್ಪ ಗೌಂಡಿ, ಲಕ್ಷ್ಮಣ್ ಕೋಲ್ಕಾರ್, ಸಿದ್ದಣ್ಣ ಪೂಜಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ತಾಲೂಕು ಅಧ್ಯಕ್ಷ ಪ್ರಭಾಕರ್ ಪೂಜಾರಿ,  ಶ್ರೀ ರಾಮ ಸೇನೆಯ ಜಿಲ್ಲಾ ಅಧ್ಯಕ್ಷ ಜಯರಾಂ ಅಂಬೇಕಲ್ಲು, ವಿಭಾಗ ಅಧ್ಯಕ್ಷ ಮೋಹನ್ ಭಟ್, ಜಿಲ್ಲಾ ವಕ್ತಾರ ಶರತ್ ಮಣಿಪಾಲ್, ಜಿಲ್ಲಾ ಪ್ರಮುಖ್ ಪ್ರಶಾಂತ್ ಭಟ್ ಪೆರಂಪಳ್ಳಿ, ಸಂದೀಪ್ ಮೂಡುಬೆಟ್ಟು ಉದ್ಯಮಿ ಚಂದ್ರಕಾಂತ್ ಶೆಟ್ಟಿ ಮುಂಬೈ,ಅಕ್ಷಯ ಮೂಡುಬೆಟ್ಟು, ಮತ್ತು ಶ್ರೀರಾಮ ಸೇನೆಯ ಜಿಲ್ಲಾ ಕಾರ್ಯಕರ್ತರು ಮತ್ತು ಸಂಗೊಳ್ಳಿ ರಾಯಣ್ಣ ಅಭಿಮಾನಿ  ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.  
 
 
 
 
 
 
 
 
 
 
 

Leave a Reply