ಮಂಥನ – ಚಿಂತನ ವೈಚಾರಿಕ ವೇದಿಕೆ ಇದರ ವತಿಯಿಂದ ಸ್ವರಾಜ್ಯ 75 – “ಸ್ವಾತಂತ್ರ್ಯ ಹೋರಾಟ” ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಕಲ್ಪನೆ ಎಂಬ ವಿಷಯದಲ್ಲಿ ಮಣಿಪಾಲದ TAPMI ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಶ್ರೀಯುತ ನಂದನ್ ಪ್ರಭು ರವರು ಉಪನ್ಯಾಸ ಹಾಗೂ ಸಂವಾದವನ್ನು ನಡೆಸಿಕೊಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘ ಚಾಲಕರಾದ ಶ್ರೀ ನಾರಾಯಣ ಶೆಣೈ ಯವರು ಅಧ್ಯಕ್ಷತೆಯನ್ನು ವಹಿಸಿಕೊಂಡರು. ಭಾಗ್ಯ ಭಟ್ ರವರು ಪ್ರಾರ್ಥನೆಯನ್ನು ನಡೆಸಿ, ಮಂಜುಳಾ ಪ್ರಸಾದ್ ರವರು ಮಂಥನದ ಪರಿಚಯ ನೀಡಿ ಪ್ರಸ್ತಾವಿಸಿದರು.
ಪ್ರಮೋದ್ ತಂತ್ರಿ ಧನ್ಯವಾದವಿತ್ತರು. ಶಕುಂತಲಾ ಶೆಣೈ ನಿರೂಪಿಸಿದರು. ಹಲವಾರು ಸಾಹಿತಿಗಳು, ಚಿಂತಕರು, ಪತ್ರಕರ್ತರು, ಹಿರಿಯ ಕಾರ್ಯಕರ್ತರು ಭಾಗವಹಿಸಿದರು.