ರಾಮ್ ಸೇನೆಯಿಂದ ಹರ್ಷನಿಗೆ ಶ್ರದ್ದಾಂಜಲಿ.

ಇತ್ತೀಚೆಗೆ ಶಿವಮೊಗ್ಗದಲ್ಲಿ ಮತಾಂಧ ಶಕ್ತಿಗಳಿಂದ ಕ್ರೂರವಾಗಿ ಹತ್ಯೆಗೀಡಾಗಿ, ಹಿಂದುತ್ವಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹರ್ಷನಿಗೆ ಆದಿತ್ಯವಾರ ಸಂಜೆ ನಿಟ್ಟೂರು ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಹಣತೆ ಬೆಳಗಿಸಿ, ಪುಷ್ಪನಮನ ಮಾಡುವುದರ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು. ಪ್ರಸ್ತಾವಿಕವಾಗಿ ರಾಮ್ ಸೇನಾ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ಮಾತನಾಡಿದರು. ನುಡಿ ನಮನವನ್ನು ಡಿ. ರಾಧಾಕೃಷ್ಣ ಶೆಟ್ಟಿ ನೇರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರ ಕಾರ್ಯದರ್ಶಿ ಯಶಪಾಲ್ ಸುವರ್ಣ, ಉದ್ಯಮಿಗಳಾದ ಪ್ರಸಾದ್ ಶೆಟ್ಟಿ, ರಂಜನ್ ಶೆಟ್ಟಿ ನಿಟ್ಟೂರು, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದುಬಸಯ್ಯ ಸ್ವಾಮಿ, ರಾಜೇಶ್ ಪೂಜಾರಿ, ರಾಮ್ ಸೇನಾ ಪಧಾದಿಕಾರಿಗಳು ಮತ್ತು ಕಾರ್ಯಕರ್ತರು, ವಿಧ್ಯಾರ್ಥಿ ಘಟಕದ ಮುಖಂಡರು, ಸ್ಥಳೀಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply