ಆಸ್ಟ್ರೇಲಿಯಾ ವಲಸೆ ನೀತಿ ಕೇಂದ್ರ ಸಚಿವರಿಂದ ಪುತ್ತಿಗೆ ಶ್ರೀಗಳ ಭೇಟಿ

ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಆಸ್ಟ್ರೇಲಿಯಾ ಅನಿವಾಸಿ ವಲಸೆ ಸಚಿವರಾದ *ಶ್ರೀ ಆಂಡ್ರೂ ಗೈಲ್ಸ್ * ಇವರು ತಮ್ಮ ನಿವಾಸಕ್ಕೆ ಕರೆಯಿಸಿ ಆಶೀರ್ವಾದ ಪಡೆ ಕೊಂಡರು .

ಈ ಸಂದರ್ಭದಲ್ಲಿ ಪೂಜ್ಯ ಶ್ರೀಪಾದರು ಇತ್ತೀಚಿಗೆ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿ ಆಕ್ರಮಣ ಮಾಡಿ ಹಾನಿ ಮಾಡಿರುವ ಬಗ್ಗೆ ಶೀಘ್ರ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು .

ಮಾನ್ಯ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತು , ಶ್ರೀಶ್ರೀಗಳ ಸಲಹೆಯನ್ನು ಪಡೆದುಕೊಂಡರು .

ಭಾರತೀಯರಿಗೆ ವೀಸಾ ಕಾರ್ಯಗಳ ಶೀಘ್ರ ವಿಲೇವಾರಿ ಬಗ್ಗೆಯೂ ಪ್ರಸ್ತಾವಿಸಲಾಯಿತು .
ಸಚಿವರು ಈ ಬಗ್ಗ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತರು .

ಪೂಜ್ಯ ಶ್ರೀಪಾದರು ಮುಂಬರುವ ತಮ್ಮ ಪರ್ಯಾಯಕ್ಕೆ ಪ್ರೀತಿಯಿಂದ ಆಹ್ವಾನಿಸಿದರು .

ಸಚಿವರು ತಮ್ಮ ಮಾತಿನಲ್ಲಿ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .

ಪೂಜ್ಯ ಶ್ರೀಪಾದರು ವಿಶ್ವಬ್ರಾತೃತ್ವ ವನ್ನು ಸಾರುವ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು .

 
 
 
 
 
 
 
 
 
 
 

Leave a Reply