ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘಧ ಅಧ್ಯಕ್ಷರಾಗಿ ಶ್ರೀ ಕೆ ಪ್ರಶಾಂತ್ ಬಾಳಿಗಾ ಆಯ್ಕೆ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 30 ನೇ ವಾರ್ಷಿಕ ಮಹಾಸಭೆ ತಾ 25/09/2022 ರಂದು ಸಂಘದ ಕೋಟೇಶ್ವರ ಗೋವಿಂದರಾಯ ವಿಠ್ಠಲ್ ಕಾಮತ ಸಭಾಂಗಣದಲ್ಲಿ ಜರಗಿತು.

ಶ್ರೀ ಕೆ ಪ್ರಶಾಂತ್ ಬಾಳಿಗಾ , ಕೆ.ಕೆ. ಫಿಶ್ ನೆಟ್ ಕೋ., ನೇಜಾರ್ ಇವರು 2022-2023 ಸಾಲಿಗೆ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಹರೀಶ್ ಕುಂದರ್ , ಶ್ರೀ ಯು ಅಜಿತ್ ಶೆಣೈ , ಶ್ರೀ ಎಂ ವಸಂತ್ ಕಿಣಿ , ಕಾರ್ಯದರ್ಶಿಯಾಗಿ ಶ್ರೀ ಎಂ ವಲ್ಲಭ್ ಭಟ್ , ಕೋಶಾಧಿಕಾರಿಯಾಗಿ ಶ್ರೀ
ಕೃಷ್ಣ ಪ್ರಸಾದ್ , ಜೊತೆ ಕಾರ್ಯದರ್ಶಿಯಾಗಿ , ಕೆ ಸುರೇಶ ಶೆಣೈ , ಶ್ರೀನಿವಾಸ ಶೆಟ್ಟಿಗಾರ್ , ರಂಜನ್ ಕಲ್ಕೂರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಮಾಜಿ ಅಧ್ಯಕ್ಷರಾದ ಐ ಆರ್ ಪೆರ್ನಾಡೀಸ್ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಶ್ರೀ ಎಂ ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು .

ಸಂಘದ ಹಿರಿಯ ಮಾಜಿ ಅಧ್ಯಕ್ಷರುಗಳಾದ ಶ್ರೀ ಎಂ ವಿಶ್ವನಾಥ್ ಭಟ್ , ಶ್ರೀ ವಿನ್ಸನ್ಟ್ ಪಿಂಟೋ , ಶ್ರೀ ಜಾನ್ ಡಿಸಿಲ್ವ ಶುಭಾಶಂಶನೆ ಗೈದರು . ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘಧ ನೂರಾರು ಸದಸ್ಯರು ಉಪಸ್ಥರಿದ್ದರು ಸಂಘದ ಸದಸ್ಯರಾದ ವೆಂಕಟೇಶ್ ಆರ್ ಪೈ , ವಾಮನ ಭಟ್ ಕಾರ್ಯಕ್ರಮ ನಿರೊಪಣೆಗೈದರು.

 
 
 
 
 
 
 
 
 
 
 

Leave a Reply