ರೇಪ್‌‌ ಮಾಡಿದ ಕಾಂಗ್ರೆಸ್ ನವರನ್ನು ಕೂಡಲೇ ಬಂಧಿಸಿ~ ಡಿಕೆಶಿ ಆಗ್ರಹ…!

ಬೆಂಗಳೂರು: “ಕಾಂಗ್ರೆಸ್ ರೇಪ್‌ ಮಾಡ್ತಿದೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಗಮನಿಸಿದರೆ ಆಡಳಿತ ಯಾವ ರೀತಿ ಇದೆ ಎಂಬುದು ಗೊತ್ತಾಗುತ್ತೆ.‌ ಹೋಂ ಮಿನಿಸ್ಟರ್ ರೇಪ್ ಮಾಡುವ ಕಾಂಗ್ರೆಸ್ ನವರನ್ನು ಡಿಜಿ ಅವರು ಕೂಡಲೇ ಬಂಧಿಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 376 ಅಡಿ ಪ್ರಕರಣ ದಾಖಲಿಸಿ ಉಗ್ರಪ್ಪ, ರೇವಣ್ಣ, ಡಿ. ಕೆ.‌ ಶಿವಕುಮಾರ್, ಸಿದ್ದರಾಮಯ್ಯ ಅವರೇ ಹೋಂ‌ ಮಿನಿಸ್ಟರ್ ಅವರನ್ನು ರೇಪ್‌‌ ಮಾಡಿದ್ದರೆ ಎಫ್ ಐಆರ್ ದಾಖಲಿಸಿ ಅರೆಸ್ಟ್ ಮಾಡಲಿ ಎಂದು ಹೇಳಿದರು.

ಘಟನೆ ನಡೆದು ದಿನವಾದರೂ ಇದುವರೆಗೆ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿಲ್ಲ. ವಿದ್ಯಾರ್ಥಿನಿಯನ್ನು ಆತ್ಯಾಚಾರ ಎಸಗಿರುವ ಆರೋಪಿಗಳನ್ನು ಯಾಕೆ ಇದುವರೆಗೆ ಬಂಧಿಸಿಲ್ಲ.‌ ಮಹಿಳೆಯರು ಆತಂಕದಲ್ಲಿಯೇ ಇರುವಂತ ಸ್ಥಿತಿ‌ ನಿರ್ಮಾಣವಾಗಿದೆ. 

ಚಾಮುಂಡಿಬೆಟ್ಟದ ಅಡಿಯಲ್ಲಿ ಎಷ್ಟು ಟೆಲಿಫೋನ್ ಮಾಹಿತಿ ಕಲೆ ಹಾಕಬಹುದು. ಪೊಲೀಸರು ಮನಸು ಮಾಡಿದರೆ ಒಂದು ಗಂಟೆಯಲ್ಲೇ ಆರೋಪಿಗಳು ಸಿಗ್ತಾರೆ. ಎಂತೆಂತ ಕ್ರೈಂ ಪತ್ತೆ ಹಚ್ಚಿದ್ದಾರೆ. ಈ ಕೇಸ್ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು.

 
 
 
 
 
 
 
 
 
 
 

Leave a Reply