ಪ್ರಸಾದ್ ರಾಜ್ ಕಾಂಚನ್ ದಿನವಿಡೀ ಜನರ ಮಧ್ಯೆ

ಹಗಲು ರಾತ್ರಿಯೆನ್ನದೇ ಕಾರ್ಯಕರ್ತರು ಹಾಗೂ ಮತದಾರರನ್ನು ಭೇಟಿ  ಮಾಡುತ್ತಿರುವ  ಪ್ರಸಾದ್ ರಾಜ್ ಕಾಂಚನ್.
ವಿಧಾನ ಸಭೆ ಕ್ಷೇತ್ರ ಬ್ರಹ್ಮಾವರ, ಚಾಂತರು, ಕರ್ಜೆ ಕಾಂಗ್ರೆಸ್  ಬ್ಲಾಕ್ ಮಟ್ಟದ ಕಾರ್ಯಕರ್ತರ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಪ್ರಸಾದ್ ರಾಜ್ ಕಾಂಚನ್ ಭಾಗವಹಿಸಿದರು.

ನಿನ್ನೆ ಬೆಳಿಗ್ಗೆ ಕಾಪುವಿನಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಮೆರವಣಿಗೆ ಯಲ್ಲಿ ಭಾಗವಹಿಸಿದರು. ಬಳಿಕ ಉಡುಪಿ ನಗರದ ಕಡಿಯಾಳಿ ಕುಂಜಿಬೆಟ್ಟು, ಮಲ್ಪೆ, ಬ್ರಹ್ಮಾವರದ ವಿವಿಧೆಡೆ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರನ್ನು‌ ಭೇಟಿ ನೀಡಿದರು.

ಈ ಬಾರಿ ಕಾಂಗ್ರೆಸ್ ಪರ ಜನರ ಒಲವಿದೆ. ಬಿಜೆಪಿ ಸರಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಕಾರ್ಯಕರ್ತರು ಬಿಜೆಪಿ ಭ್ರಷ್ಟಚಾರದ ಬಗ್ಗೆ ಮತದಾರರ ಮನೆ ಮನೆಗೆ ಮುಟ್ಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ ಉಡುಪಿಯಿಂದಲೂ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವ ದೃಢ ನಿರ್ಧಾರವನ್ನು ಕಾರ್ಯಕರ್ತರು ತೆಗೆದು ಕೊಳ್ಳ ಬೇಕಾಗಿದೆ ಎಂದು ಕರೆ ನೀಡಿದರು.

 
 
 
 
 
 
 
 
 
 
 

Leave a Reply