ಜಿನ್ನಾ-ನೆಹರೂ ಕಲ್ಪನೆಯ ಭಾರತ ವಿಭಜನೆಯ ಕೂಗು ಕಾಂಗ್ರೆಸ್ಸಿನಿಂದ ಮತ್ತೊಮ್ಮೆ ಮೊಳಕೆಯೊಡೆದಿದೆ : ಕುಯಿಲಾಡಿ

ಅಂದು ಅಧಿಕಾರದ ದುರಾಸೆಯಿಂದ ದೇಶವನ್ನು ಒಡೆಯುವ ಕುಕೃತ್ಯಕ್ಕೆ ನೆಹರೂ-ಜಿನ್ನಾ ನಾoದಿ ಹಾಡಿದ್ದು ಕರಾಳ ಇತಿಹಾಸ. ಇಂದು ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರದ ಕಲ್ಪನೆಯನ್ನು ತೇಲಿಬಿಟ್ಟಿರುವುದು ದೇಶದ್ರೋಹದ ಸಂಕೇತವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಜನತೆ ಕಾಂಗ್ರೆಸ್ಸಿನ ಆಡಳಿತ ವೈಫಲ್ಯ ಮತ್ತು ವಿಭಜನಕಾರಿ ಧೋರಣೆಯನ್ನು ಕೂಲಂಕುಷವಾಗಿ ಗಮನಿಸುತ್ತಿರುವುದು ವಾಸ್ತವ.

ಕಾಂಗ್ರೆಸ್ಸಿಗರಿಗೆ ಉತ್ತಮ ಆಡಳಿತಕ್ಕಿಂತ ದೇಶವನ್ನು ಒಡೆಯುವ ಕೃತ್ಯವೇ ಮುಖ್ಯ ಎನಿಸಿದೆ. ಇದು ಕಾಂಗ್ರೆಸ್ಸಿನ ಮೂಲ ಸಿದ್ದಾಂತದ ಇನ್ನೊಂದು ಭಾಗವಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply