ಬೈಂದೂರು: 4 ಬಾರಿಯ ಶಾಸಕ ಗೋಪಾಲ ಔಟ್; ಸಾಮಾನ್ಯ ಕಾರ್ಯಕರ್ತ ಗಂಟಿಹೊಳೆ ಇನ್

ಬೈಂದೂರು: ತೀವ್ರ ಕುತೂಹಲ ಕೆರಳಿಸಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ
ಮೊದಲ ಬಾರಿಗೆ ಕಣಕ್ಕಿಳಿದಿದ್ದ ಬಿಜೆಪಿಯ ಗುರುರಾಜ್ ಗಂಟೆಹೊಳೆ ಅವರು
ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದರೆ, ಕಾಂಗ್ರೆಸ್‌ನಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ. ಗೋಪಾಲ ಪೂಜಾರಿ ಅವರನ್ನು ಬಿಜೆಪಿಯ ಅಚ್ಚರಿಯ ಅಭ್ಯರ್ಥಿಯಾಗಿದ್ದ ಗುರುರಾಜ್ ಗಂಟೆಹೊಳೆ
ಅವರು 16,153 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಾ, 3 ಬಾರಿಗೆ ಶಾಸಕರಾಗಬೇಕೆನ್ನುವ
ನಿರೀಕ್ಷೆಯಲ್ಲಿದ್ದ ಗೋಪಾಲ ಪೂಜಾರಿಯವರಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಕಳೆದ
ಬಾರಿಯ ಸೋತಿದ್ದ ಅನುಕಂಪವು ಈ ಬಾರಿ ಅವರ ಕೈ ಹಿಡಿಯಲಿಲ್ಲ.
ಬಿಜೆಪಿಯಿಂದ ಸುಕುಮಾರ್ ಶೆಟ್ಟರಿಗೆ ಟಿಕೆಟ್ ಸಿಗದಿರುವುದು ಲಾಭ ತರಬಹುದು ಅನ್ನುವ
ಕಾಂಗ್ರೆಸ್ ಆಶಾಭಾವನೆ ಸಹ ಹುಸಿಯಾಗಿದೆ. ಇದೇ ಕಾರಣಕ್ಕಾಗಿ ಪ್ರಮುಖ
ಕೆಲವರು ಪಕ್ಷವನ್ನು ಬಿಟ್ಟಿದ್ದರು.

ಸಂಘಟನೆಯ ತಳಮಟ್ಟದ ಕಾರ್ಯಕರ್ತರ ಸಾಂಘಿಕ ಬಲ ಬಿಜೆಪಿ ಗೆಲುವಿಗೆ
ಪ್ರಮುಖ ಕಾರಣವಾಗಿದೆ. ಬೈಂದೂರಲ್ಲಿ ಕಳೆದ 4 ಚುನಾವಣೆಗಳಲ್ಲಿ ಬಿಜೆಪಿ ಹಾಗೂ
ಕಾಂಗ್ರೆಸ್ ನಡುವೆ ವಿಜಯದ ಮಾಲೆ ಚಂಚಲೆಯಾಗಿದ್ದಳು. ಅಂದರೆ 2004ರಲ್ಲಿ ಕಾಂಗ್ರೆಸ್, 2008ರಲ್ಲಿ ಬಿಜೆಪಿ, 2013ರಲ್ಲಿ ಕಾಂಗ್ರೆಸ್ ಹಾಗೂ 2018 ರಲ್ಲಿ ಬಿಜೆಪಿ
ಗೆಲುವನ್ನು ಸಾಧಿಸಿತ್ತು. ಆದರೆ ಈ ಬಾರಿ ಈ ಹಾವು – ಏಣಿ ಆಟಕ್ಕೆ ಬಿಜೆಪಿ
ಬ್ರೇಕ್ ಹಾಕಿದ್ದು ಬೈಂದೂರಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸತತ ಎರಡನೇ
ಬಾರಿಗೆ ಗೆಲುವನ್ನು ಸಾಧಿಸಿದೆ.

 
 
 
 
 
 
 
 
 
 
 

Leave a Reply