ರಾಜ್ಯಸಭೆಯಲ್ಲಿ ಬಿಜೆಪಿ ತ್ರಿ”ವಿಕ್ರಮ

ಬೆಂಗಳೂರು: ಪೈಪೋಟಿಯ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಆಡಳಿತ ಬಿಜೆಪಿಗೆ ತ್ರಿಬಲ್ ಧಮಾಕಾ ಲಭಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ ಜೆಡಿಎಸ್ ಶೂನ್ಯ ಸಂಪಾದನೆಯೊಂದಿಗೆ ನಿರಾಸೆ ಮಡುವಿಗೆ ಬಿದ್ದಿದೆ.

ತಲಾ 46 ಮೊದಲ ಪ್ರಾಶಸ್ತ್ಯ ಮತಗಳಿಸಿದ ಬಿಜೆಪಿಯ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್‌ನ ಜೈರಾಮ್ ರಮೇಶ್ ಆಯ್ಕೆಯಾಗಿದ್ದಾರೆ ಎಂದು ಮೊದಲಿಗೆ ಘೋಷಿಸಲಾಯಿತು. ಬಿಜೆಪಿಯ ಜಗ್ಗೇಶ್ ಅವರು 44 ಮೊದಲ ಪ್ರಾಶಸ್ತ್ಯ ಗಳಿಸಿದ್ದರು. ಗೆಲುವಿಗೆ ನಿಗದಿತ ಮತ ಮೌಲ್ಯವನ್ನು ಗಳಿಸಲು ಎರಡನೇ ಪ್ರಾಶಸ್ತ್ಯದ ನೆರವಾದವು. ಮೂರನೇಯವರಾಗಿ ಜಗ್ಗೇಶ್ ಆಯ್ಕೆಯಾದರೆ, ನಾಲ್ಕನೇ ಸ್ಥಾನಕ್ಕೆ ಹಣಾಹಣಿ ಏರ್ಪಟ್ಟಿತು.

ಅಂತಿಮವಾಗಿ ಕಣದಲ್ಲಿ ಉಳಿದ ಬಿಜೆಪಿಯ ಲೆಹರ್‌ಸಿಂಗ್ 33 ಮೊದಲ ಪ್ರಾಶಸ್ತ್ಯ ಮತಗಳೊಂದಿಗೆ ಮುನ್ನಡೆ ಸಾಧಿಸಿದರೆ, ಜೆಡಿಎಸ್‌ನ ಕುಪೇಂದ್ರರೆಡ್ಡಿ 30 ಮತ್ತು ಕಾಂಗ್ರೆಸ್‌ನ ಮನ್ಸೂರ್ ಅಲಿಖಾನ್ 25 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಗಳಿಸಿದರು.

 
 
 
 
 
 
 
 
 
 
 

Leave a Reply