ಆಗಸ್ಟ್ 6, ಶುಕ್ರವಾರದಂದು ಉಡುಪಿಯಲ್ಲಿ ನೂತನ ಸಚಿವದ್ವಯರಿಗೆ ಅಭಿನಂದನಾ ಸಮಾರಂಭ

ರಾಜ್ಯದ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ವಿ. ಸುನಿಲ್ ಕುಮಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ದಿನಾಂಕ 06-08-2021 ಶುಕ್ರವಾರ ಅಪರಾಹ್ನ 3.00ಕ್ಕೆ ಅಮೃತ್ ಗಾರ್ಡನ್ ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೆಲ್ಲರೂ ಗಡಿಭಾಗವಾದ ಪರ್ಕಳದಲ್ಲಿ ಮಧ್ಯಾಹ್ನ 02.30 ಕ್ಕೆ ಸೇರಿ  ಅವರನ್ನು ಸ್ವಾಗತಿಸಿ ಬಳಿಕ ಸಮಾರಂಭ ನಡೆಯುವ ಅಮೃತ್ ಗಾರ್ಡನ್ ಗೆ ತೆರಳುವುದು.

ಉಡುಪಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೆಲ್ಲರೂ ಹಾಜರಿರ ಬೇಕಾಗಿ ಶಾಸಕ ರಘುಪತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply