ಉಡುಪಿಯ: ಪಾಕಶಾಲಾ 24ನೇ ಶಾಖೆ ಶುಭಾರಂಭ

ಉಡುಪಿ: ಹೋಟೆಲ್ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಪಾಕಶಾಲಾ 24ನೇ ಶಾಖೆ ಸೋಮವಾರ ಇಲ್ಲಿನ ಕಿನ್ನಿಮೂಲ್ಕಿ ಗೋವಿಂದ ಕಲ್ಯಾಣ ಮಂಟಪ ಬಳಿಕ ಸಮನ್ವಯ ಬೋಟೀಕ್ ಹೋಟೆಲ್ ನ ಮೂರನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ಪಾಕಶಾಲಾ ಅಂಬಾಸೆಡರ್ ಹಾಗೂ ಚಲನಚಿತ್ರ ನಟ ಸಿಹಿಕಹಿ ಚಂದ್ರು ಶಾಖೆಯನ್ನು ಉದ್ಘಾಟಿಸಿದರು.

ಕೊಳಂಬೆ ಶಾಂತಿನಗರ ಮದೀನಾ ಮಸೀದಿ ಮೌಲಾನಾ ಶೌಕತ್ ಅಲಿ ರಜ್ವಿ, ಯುಬಿಎಂಸಿ ಜುಬಿಲಿ ಚರ್ಚ್ ಧರ್ಮಗುರು ಸಂತೋಷ್ ಎ., ಮಣಿಪಾಲ ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ. ಶರತ್ ಕೆ. ರಾವ್ ಮತ್ತು ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಭ್ಯಾಗತರಾಗಿದ್ದರು. ಪಾಕಶಾಲಾ ಆಡಳಿತ ನಿರ್ದೇಶಕ ಕೆ. ಎನ್. ವಾಸುದೇವ ಅಡಿಗ ಉಪಸ್ಥಿತರಿದ್ದರು 

ಶುಚಿ ರುಚಿಗೆ ಹೆಸರಾದ ಪಾಕಶಾಲಾ ಉಡುಪಿ ಶಾಖೆಯಲ್ಲಿ ಉತ್ತರ ಭಾರತ ಮತ್ತು ಚೈನೀಸ್ ಭಕ್ಷ್ಯಗಳು ಮತ್ತು ಖಾದ್ಯಗಳು ಲಭಿಸಲಿವೆ. ಜೊತೆಗೆ ಬರ್ಗರ್, ಪಿಜ್ಜಾ, ಪಾಸ್ತಾ ಚಾಟ್ಸ್ ಇತ್ಯಾದಿ ರುಚಿಕರ ಐಟಮ್ ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದು ಪಾಕಶಾಲಾ ಆಡಳಿತ ನಿರ್ದೇಶಕ ಕೆ. ಎನ್. ವಾಸುದೇವ ಅಡಿಗ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಕ್ಯಾಟರಿಂಗ್ ಸೌಲಭ್ಯವೂ ಇದ್ದು, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಖಾದ್ಯಗಳು ಲಭ್ಯ ಎಂದರು. ಕುಂದಾಪುರ ಸಮೀಪದ ಕುಂಭಾಶಿಯಲ್ಲಿ ಪಾಕಶಾಲಾ ಶಾಖೆ ಇದ್ದು, ಜಿಲ್ಲೆಯಲ್ಲಿ ಇದು ಎರಡನೇ ಶಾಖೆ.

 
 
 
 
 
 
 
 
 
 
 

Leave a Reply