ಗಾಂಧಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಗೌರವಾಭಿನಂದನೆ

ಉಡುಪಿ: ಉಡುಪಿಯ ಹೆಸರಾಂತ ಗಾಂಧಿ ಆಸ್ಪತ್ರೆಯ 29ನೇ ವರ್ಷಾಚರಣೆ ಸಂದರ್ಭದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ನಿವೃತ್ತ ಜಿಲ್ಲಾ ಸರ್ಜನ್, ಎಲುಬು ಮತ್ತು ಕೀಲು ತಜ್ಞ ಡಾ. ಮಧುಸೂದನ ನಾಯಕ್ ಹಾಗೂ ನಿವೃತ್ತ ಫಿಸಿಶಿಯನ್ ಡಾ. ಚಂದ್ರಶೇಖರ ಅಡಿಗ ಅವರ ದೀರ್ಘ ಕಾಲದ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಐ.ಎಂ.ಎ. ಅಧ್ಯಕ್ಷ ಮತ್ತು ಡಾ. ಎ. ವಿ. ಬಾಳಿಗ ಮೆಮೊರಿಯಲ್ ಆಸ್ಪತ್ರೆ ನಿರ್ದೇಶಕ ಡಾ. ಪಿ. ವಿ. ಭಂಡಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ. ಆರ್., ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ, ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಎಂ. ಹರಿಶ್ಚಂದ್ರ, ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರ್ರಿ ಎ., ಪಂಚಮಿ ಟ್ರಸ್ಟ್ ನ ಲಕ್ಷ್ಮಿ ಹರಿಶ್ಚಂದ್ರ ಮತ್ತು ಡಾ. ಪಂಚಮಿ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply