ಪಾಂಡೇಶ್ವರ-ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನರ ಸವಲತ್ತು ವಿತರಣೆ

ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ ವತಿಯಿಂದ ಪಂಚಾಯತ್ ಆವರಣದಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನರ ಸವಲತ್ತು ವಿತರಣೆ ಕಾರ್ಯಕ್ರಮವು ಗುರುವಾರ ಜರಗಿತು.
ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ ಪೂಜಾರಿ ಪರಿಶಿಷ್ಟ ಜಾತಿಪಂಗಡದ ಫಲಾನುಭವಿಗಳಿಗೆ ಛಕ್ ವಿತರಿಸಿ ಮಾತನಾಡಿ ಸರಕಾರದಿಂದ ಅಥವಾ ಪಂಚಾಯತ್ ಮೂಲಕ ನೀಡುವ ಸಹಾಯಧನ ಸಪರ್ಮಕವಾಗಿ ವಿನಿಯೋಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ತಾಲೂಕು ವಿಕಲಚೇತನರ ಸಂಯೋಜಕರಾದ ಮದುಸೂದನ್ ಅವರು ವಿಕಲ ಚೇತನರಿಗೆ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಯತ್ ಉಲ್ಲಾಬೇಗ್ ಕಾರ್ಯಕ್ರಮ ಸ್ವಾಗತಿಸಿದರು. ,ಪಂಚಾಯತ್ ಕಾರ್ಯದರ್ಶಿ ವಿಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪಾoಡೇಶ್ವರ ಗ್ರಾಮಪಂಚಾಯತ್ ವತಿಯಿಂದ ಪಂಚಾಯತ್ ಆವರಣದಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನರ ಸವಲತ್ತುಗಳನ್ನು ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ ಪೂಜಾರಿ ವಿತರಿಸಿದರು. ಪಂಚಾಯತ್ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply