ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ~ಪೇಜಾವರ ಶ್ರೀ

ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ ನಿರ್ಮಾಣಕ್ಕೆ ಶೀಘ್ರ ಭೂಮಿ ಮಂಜೂರು : ಪೇಜಾವರ ಶ್ರೀಗಳಿಗೆ ಯೋಗಿ ಆದಿತ್ಯನಾಥ್ ಭರವಸೆ.

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡ್ಯೂರಪ್ಪ ನವರು ಅಯೋಧ್ಯೆಯಲ್ಲಿ ಭವಿಷ್ಯದಲ್ಲಿ ರಾಮಮಂದಿರ ಕ್ಕಾಗಿ ತೆರಳುವ ರಾಜ್ಯದ ಲಕ್ಷಾಂತರ ಭಕ್ತರ ಅನುಕೂಲ ಕ್ಕಾಗಿ ಭವ್ಯ ಕರ್ನಾಟಕ ಯಾತ್ರಿ ಭವನ ನಿರ್ಮಿಸಲು ಭೂಮಿ ಒದಗಿಸುವಂತೆ ಉ ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದು ಮನವಿ ಮಾಡಿದ್ದರು .

ಸೋಮವಾರ ಯೋಗಿಯವರನ್ನು ಭೇಟಿ ಮಾಡಿದ ಶ್ರೀ ಪೇಜಾವರ ಶ್ರೀಗಳು ಈ ವಿಷಯವನ್ನು ಯೋಗಿಯವರ ಸ್ಮರಣೆಗೆ ತಂದಿದ್ದರು . ಅದಕ್ಕೆ ಪ್ರತಿಕ್ರಿಯಿಸಿದ ಯೋಗಿ ಯವರು ಆದಷ್ಟು ಶೀಘ್ರ ಭೂಮಿಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪೇಜಾ ವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ . 

 
 
 
 
 
 
 
 
 
 
 

Leave a Reply