ಮಂಗಳೂರು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಗಾಂಧಿಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜನ್ಮದಿನ ಆಚರಣೆ

ಮಂಗಳೂರು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮಂಗಳೂರು ವಲಯದ ವತಿಯಿಂದ ಇಂದು 152ನೇ ವರ್ಷದ ಗಾಂಧಿಜಯಂತಿ ದಿನ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಯವರ 117ನೇ ಜನ್ಮದಿನವನ್ನು ನಗರದ ಮಣ್ಣಗುಡ್ಡೆಯಲ್ಲಿರುವ ಗಾಂಧಿಪಾರ್ಕ್ ನಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು. 

ನಂತರ ವಲಯದ ಉಪಾಧ್ಯಕ್ಷ ವಸಂತ್ ರಾವ್ ರವರ 80ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ,ಸ್ಮರಣಿಕೆ ನೀಡಿ ಆಚರಿಸಲಾಯಿತು.

ವಲಯದ ಗೌರವಾಧ್ಯಕ್ಷರಾದ ಜಗನ್ನಾಥ್ ಶೆಟ್ಟಿ,ಜಿಲ್ಲಾ ಮಾಜಿ ಸಂಚಾಲಕ ವಿಠ್ಠಲ್ ಚೌಟ, ವಲಯಾಧ್ಯಕ್ಷ ಮಧು ಮಂಗಳೂರು, ಉಪಾಧ್ಯಕ್ಷ ನಿಖಿಲ್ ಡಿಸೋಜಾ, ಕಾರ್ಯದರ್ಶಿ ಶ್ರೀಕಾಂತ್ ತಿಲಕ್,ನವೀನ್ ಕೋಡಿಕಲ್, ಜಿಲ್ಲಾ ಕಾರ್ಯದರ್ಶಿ ಹರೀಶ್ ಅಡ್ಯಾರ್,ಅಜಯ್ ಕುಮಾರ್, ಖಜಾಂಚಿ ಮುಕೇಶ್ ಶೆಟ್ಟಿ, ಕ್ರೀಡಾಕಾರ್ಯದರ್ಶಿ ಸಂದೇಶ್ ಆಚಾರ್ಯ, ವಲಯದ ಮಾಜಿ ಅಧ್ಯಕ್ಷರುಗಳಾದ ಪದ್ಮನಾಭ ಸುವರ್ಣ,ಲೋಕೇಶ್, ಕರುಣಾಕರ ಕಾನಂಗಿ,ಪದಾಧಿಕಾರಿಗಳು ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply