ಈ ಬಗ್ಗೆ ಲಕ್ಷ್ಮೀ ಯವರು ನಗರ ಠಾಣೆಗೆ ದೂರು ನೀಡಿದ್ದು , ತಕ್ಷಣ ಕಾರ್ಯಪೃವತ್ತರಾದ ಉಡುಪಿ ನಗರ ಠಾಣೆಯ ಪೊಲೀಸರು ನಗರದ ಸಿಸಿಟಿವಿ ಹಾಗೂ ಡ್ರೋನ್ ವಿಡಿಯೋಗಳನ್ನು ಪರಿಶೀಲಿಸಿದಾಗ ಅರೋಪಿಗಳ ಸುಳಿವು ದೊರೆತ್ತಿದ್ದು , ಅರೋಪಿಗಳು ಉಡುಪಿಯ ಶ್ರೀ ರಾಮ್ ರೆಸಿಡೆನ್ಸಿ ಯಲ್ಲಿ ತಂಗಿರುವ ಬಗ್ಗೆ ಮಾಹಿತಿಯ ಮೇರೆಗೆ ಮೂವರು ಮಹಿಳೆ ಸೇರಿ ಐದು ಮಂದಿ ಅರೋಪಿಗಳನ್ನ ಬಂಧಿಸಿದ್ದಾರೆ.
ತಮ್ಮಿ ಶೆಟ್ಟಿ ಮಣಿ, ಪ್ರಿಯಾಂಕ ಕಾಕಣಿ, ಇಟ್ಟಾ ಜಾನ್ಸಿ, ಇಟ್ಟಾ ಸಾಗಾರ, ಹರಿಬಾಬು ಬಂಧಿತರಾದ ಖತರ್ ನಾಕ್ ಕಳ್ಳ ರಾಗಿದ್ದು ಇವರೆಲ್ಲರೂ ಅಂಧ್ರ ಮೂಲದವರು ಎನ್ನಲಾಗಿದೆ. ಉಡುಪಿಯಲ್ಲಿ ಸಂಕ್ರಾತಿ ಹಾಗೂ ಪರ್ಯಾಯ ಉತ್ಸವಗಳು ನಡೆಯುವ ಹಿನ್ನಲೆಯಲ್ಲಿ ಕಳವು ಮಾಡುವ ಉದ್ದೇಶ ದಿಂದ ಉಡುಪಿಗೆ ಬಂದಿರುವ ಬಗ್ಗೆ ಪೊಲೀಸರಲ್ಲಿ ಅರೋಪಿಗಳು ಬಾಯಿ ಬಿಟ್ಟಿದ್ದಾರೆ.
ಪ್ರಕರಣದ ಅರೋಪಿಗಳನ್ನು ಬಂಧಿಸಲು ಉಡುಪಿ ಎಸ್ ಪಿ ಎನ್ ವಿಷ್ಣುವರ್ಧನ್ , ಎ ಎಸ್ ಪಿ ಕುಮಾರಚಂದ್ರ ಡಿ ವೈ ಎಸ್ ಪಿ ಸದನಂದ ನಾಯ್ಕ್, ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆ ಪೊಲೀಸ್ ನೀರಿಕ್ಷಕರಾದ ಪ್ರಮೋದ್ ಕುಮಾರ್ ಪಿ ,ಉಪ ನಿರೀಕ್ಷಕರಾದ ವಾಸಪ್ಪ ನಾಯ್ಕ್ ,ಪಿ ಎಸ್ ಐ ಪ್ರಸಾದ್, ಸುಹಾಸ್, ಎ ಎಸ್ ಐ ವಿಜಯ್ ಸಿಬಂದಿಗಳಾದ ಜೀವನ್, ಸತೀಶ್ , ಲೋಕೆಶ್, ಅಶಾಲತ, ಬಾಲಕೃಷ್ಣ , ರಿಯಾಜ್ ಅಹ್ಮದ್, ಚೇತನ್, ಕಿರಣ್ , ಸಂತೋಷ್, ಸುಷ್ಮಾ,ರೂಪ, ಕಾರ್ತಿಕ್ ಗಂಗಾಧರಪ್ಪ ಕಾರ್ಯಚರಣೆಯಲ್ಲಿ ಭಾಗಿವಹಿಸಿದ್ದರು.