ಹೊಸ ಕನಸುಗಳೊಂದಿಗೆ ಅರಳಿದ, ನಸು ಗೆಂಪಿನಿಂದ ನಳನಳಿಸುವ ಈ ನವ ಚಿಗುರಿಗೂ ಗೊತ್ತು ಮುಂದೊಂದು ದಿನ ತಾನು ಮುದುಡಿ, ನಯನಗಳಿಗೆ (ಬಣ್ಣ) ಮಾಸಿದವಳಾಗಿ ಈ ಜಗದಿಂದಲೇ ಕಮರಿಹೋಗುವ ಜೀವವೆಂದು.
ಆದರೂ ಈ ಪ್ರಕೃತಿಯಲ್ಲಿರುವ ಎಲ್ಲಾ ಜೀವಿ ಗಳಿಗಿಂತ ಅತೀ ಬುದ್ಧಿಜೀವಿಯೆಂದು ಬೀಗುವ ಮನುಕುಲಕ್ಕೆ ಮಾತ್ರ ಇನ್ನೂ ಅರಗಿಸಿಕೊಳ್ಳಲಾಗದ ಸತ್ಯವೆಂದರೆ ಈ ಬಾಳು ಬರೀ ಮೂರುದಿನದ ರಂಗು ರಂಗಿನ ನಾಟಕವೆಂದು.
ನಾಟಕ ಮುಗಿದ ಮೇಲೆ ತಾನೂ ಪ್ರಕೃತಿಯ ಕಣ್ಣಿಗೆ ಮಾಸಿದ ಹೂವೆಂದು….