ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ – ಮಾರಾಟ.

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ಗೀತಾಂಜಲಿ ಶೋಪರ್ ಸಿಟಿ ಕಟ್ಟಡದಲ್ಲಿರುವ ಉಡುಪಿ ಶೋರೂಮ್ ನಲ್ಲಿ ಮಾರ್ಚ್ 06 ರಿಂದ ಮಾ.14 ರ ತನಕ ಆಯೋಜಿಸಲಾದ ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿ ಶೋ ಕಾರ್ಯಕ್ರಮವು ಶನಿವಾರ ನಡೆಯಿತು.

ಮಹೇಶ್ ಬೆಟ್ಟಿನ್ , ಆಶಾ ಅಮೀನ್ ಮಲ್ಪೆ, ಬಿಂದು ತಂಗಪ್ಪನ್ ಅವರು ಕ್ರಮವಾಗಿ ಎರಾ, ಡಿವೈನ್ ಚಿನ್ನಾಭರಣ, ವಜ್ರಾಭರಣಗಳನ್ನು ಅನಾವರಣಗೊಳಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಉಡುಪಿ ಶೋರೂಮ್ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ ಸೂಕ್ಷ್ಮಾತಿ  ಸೂಕ್ಷ್ಮ ಕುಸುರಿ ಕೆಲಸಗಳಿಂದ ನಿರ್ಮಿತ ಚಿನ್ನಾಭರಣಗಳು ಕುಶಲಕರ್ಮಿಗಳ ಕೌಶಲ್ಯವನ್ನು ಪ್ರತಿಪಾದಿಸುತ್ತದೆ. ಪ್ರತಿ ಚಿನ್ನಾಭರಣವು ಅವರ ನೈಪುಣ್ಯತೆ ಮತ್ತು ಕುಶಲತೆಗೆ ಮೆರುಗು ನೀಡಿ ಈ ಪ್ರದರ್ಶನದ ವಿಷಯವಾದ ‘ಪ್ರತಿ ಅಭರಣದಲ್ಲೂ ಕಳೆಯಿದೆ’ ಎಂಬುದಕ್ಕೆ ಸಾಕ್ಷಿಯಾಗಿದೆ. ಆರ್ಟಿಸ್ಟ್ರಿ ಬ್ರಾಂಡೆಡ್ ಜುವೆಲ್ಲರಿಯ ಸಬ್ ಬ್ರ್ಯಾಂಡ್ ಚಿನ್ನಾಭರಣ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳು ಪ್ರದರ್ಶನದಲ್ಲಿವೆ. ‘ಮೈನ್’ ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು ,’ ಡಿವೈನ್’ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹ ವಿದೆ .

‘ಪ್ರಶಿಯಾ’ಲ್ಲಿ ರುಬಿ , ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು ಎಥಿನಿಕ್ಸ್’ ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ.’ ಏರ’ ಅನ್ನಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ ‘ ಹಾಯ್ ‘ ಯಲ್ಲಿ ಯುವತಿಯರ ಮನಸೆಳೆ ಯುವ ಮನಮೋಹಕ ಆಭರಣಗಳಿವೆ.

‘ ಸ್ಟಾರ್ಲೆಟ್’ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆ . ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸಂಪೂರ್ಣ ಪಾರದರ್ಶಕ , ಉಚಿತ ನಿರ್ವಹಣೆ , ವಿನಿಮಯದಲ್ಲಿ ಶೂನ್ಯ ಕಡಿತ, ಬೈಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಹೊಂದಿದ್ದು, 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್‌ನ ವಿಶೇಷತೆಗಲಾಗಿದೆ.

ಈ ಸಂದರ್ಭದಲ್ಲಿ ಗ್ರಾಹಕರಿಗೆ ಭಾರತದಾದ್ಯಂತ ಚಿನ್ನಾಭರಣಗಳಿಗೆ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ , ಶುದ್ಧ ಚಿನ್ನ ಸುಂದರ ವಿನ್ಯಾಸಗಳು ನ್ಯಾಯ ಸಮ್ಮತವಾದ ತಯಾರಿಕಾ ಶುಲ್ಕ ಇದು ನ್ಯಾಯಯುತ ಬೆಲೆಯ ಭರವಸೆ, ಬ್ರಾಂಡೆಡ್‌ ವಾಚ್‌ಗಳ ಮೇಲೆ ವಿಶೇಷ ಕಡಿತ ನೀಡಲಾಗುವುದು ಎಂದರು.

ಆಭರಣಗಳನ್ನು ಧರಿಸಿ ಉಡುಪಿಯ ರೂಪದರ್ಶಿಗಳಾದ ವೈಭವಿ ಭಂಡಾರಿ ಮಣಿಪಾಲ್, ಪ್ರಸಿದ್ದಿ ಸಾಲ್ಯಾನ್, ಅಕ್ಷತಾ ಕೆ ಶೆಟ್ಟಿ, ಅನುಷಾ ಅಮೀನ್, ಮೌಸಮಿ ಶೆಟ್ಟಿ ಕಾಪು, ರಕ್ಷಿತಾ ಶೆಟ್ಟಿ ವಕ್ವಾಡಿ ರಾಂಪ್ ವಾಕ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.  ಮ್ಯಾನೇಜ್ಮೆಂಟ್ ಸದಸ್ಯರು, ಗ್ರಾಹಕರು,ಸಿಬ್ಬಂದಿ ಉಪಸ್ಥಿತ ರಿದ್ದರು. ವಿಜ್ಞೇಶ್ ಕಾರ್ಯಕ್ರಮ ನಿರೂಪಿಸಿ ರಾಘವೇಂದ್ರ ನಾಯಕ್ ವಂದಿಸಿದರು.

 
 
 
 
 
 
 
 
 
 
 

Leave a Reply