ಯೋಧರಿಗೆ ಜ್ಯೋತಿ ನಮನ ಹಾಗೂ ವಿಭಜನ್ ಸ್ಮ್ರತಿ ದಿವಸ್ ಕಾರ್ಯಕ್ರಮ

ಭಾರತ ದೇಶ ಸ್ವಾತಂತ್ರ್ಯಗೊಂಡು 75 ನೇ ದಿನ ಅಮ್ರತಮಹೋತ್ಸವ ಆಚರಣೆ ಮಾಡುವ ಸಂದರ್ಭದಲ್ಲಿ ಭಾಗವಹಿಸಲು ನಮಗೆ ಅವಕಾಶ ದೊರಕಿರುವುದು ನಮ್ಮ ಸೌಭಾಗ್ಯ. ಈ ಸವಿ ನೆನಪನ್ನು ಚಿರಕಾಲ ನೆನಪಿಡುವಂತೆ ಮಾಡಲು ಪ್ರತೀ ಮನೆ ಮನೆಗಳಿಂದ ಭಾಗವಹಿಸಿ ಹೆಮ್ಮೆ ಪಡಲು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ನಿರ್ಧರಿಸಿ ಯೋಧರಿಗೆ ಜ್ಯೋತಿ ನಮನ ಹಾಗೂ ದೇಶ ವಿಭಜನೆಯ ಕರಾಳ ದಿನ ನೆನಪಿಸಲು ವಿಭಜನ್ ಸ್ಮ್ರತಿ ದಿವಸ್ ಕಾರ್ಯಕ್ರಮ ಅಳವಡಿಸಿರುವೆವು. ಮನೆ ಮನೆಗಳಿಂದ ಮಹಿಳೆಯರು, ಪುರುಷರು, ವಿದ್ಯಾರ್ಥಿಗಳು ಎಲ್ಲರೂ ಸೇರಿಕೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ.

ಪಂಜಿನ ಮೆರವಣಿಗೆ: ದಿನಾಂಕ 14-08-2022 ಭಾನುವಾರ ಸಂಜೆ 6.30 ಕ್ಕೆ

ಅಲೆವೂರು ದುರ್ಗಾನಗರದಿಂದ ನೆಹರೂ ನಗರ ತನಕ. 

ಸಮಾರೋಪ: ನೆಹರೂನಗರ. 

ದಿಕ್ಸೂಚಿ ಭಾಷಣ: ಸುಪ್ರಸಾದ್ ಶೆಟ್ಟಿ, ವಕೀಲರು, ಹಾಗೂ ಅಧ್ಯಕ್ಷರು, ಸಕ್ಕರೆ ಕಾರ್ಖಾನೆ ಬ್ರಹ್ಮಾವರ. 

 ವಿ.ಸೂ: ಬರುವಾಗ ರಾಷ್ಟ್ರ ಧ್ವಜ ಇದ್ದರೆ ತರಬೇಕು. ಪಂಜಿನ ವ್ಯವಸ್ಥೆ ಮಾಡಲಾಗುವುದು.

ಬನ್ನಿ ಮನೆ ಮನೆಗಳಿಂದ ಭಾಗವಹಿಸಿ ಯಶಸ್ವಿಗೊಳಿಸಿ, ಅಮ್ರತಮಹೋತ್ಸವ ಚಿರಕಾಲ ನೆನೆಯುವಂತೆ ಮಾಡೋಣ, ದೇಶಪ್ರೇಮ ಮೆರೆಯೋಣ.

 
 
 
 
 
 
 
 
 
 
 

Leave a Reply