ಗುರುವಾರದ ದಿನ ಪುಷ್ಯ ನಕ್ಷತ್ರವಿದ್ದರೆ ಆ ದಿನ, ಗುರುಪುಷ್ಯಯೋಗ ಎನ್ನಲಾಗುತ್ತದೆ. ಈ ದಿನ ದೇವ ಗುರುಗಳ ಸ್ಮರಣೆ ಅತ್ಯಂತ ಪುಣ್ಯದಾಯಕ. ಗುರುಗಳ ಜಪ, ಸ್ಮರಣೆ ಫಲದಾಯಕ. ಈ ಪರ್ವ ಕಾಲದಲ್ಲಿ ಗುರುಸ್ಮರಣೆ ಮಾಡೋಣ.
ಕಲಿಯುಗದ ಕಾಮಧೇನು, ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರನ್ನ ಈ ಪರ್ವ ಕಾಲದಲ್ಲಿ ಸ್ಮರಿಸಿ ಧನ್ಯರಾಗೋಣ.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ|
ಶ್ರೀರಾಘವೇಂದ್ರಗುರುವೇ ನಮೋಅತ್ಯಂತ ದಯಾಲವೇ||
ಸೋಮಸೂರ್ಯಪರಾಗೇ ಚ ಪುಷ್ಯಾರ್ಕಾದಿಸಮಾಗಮೇ ||
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ಎಂಬಂತೆ ರಾಯರ ಸ್ತೋತ್ರದ ಜತೆ ಶ್ರೀರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಜಪಿಸಿ ಪುನೀತರಾಗಿ.
ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀವೇದವ್ಯಾಸ ದೇವರು ಎಲ್ಲರನು ಕಾಯಲಿ
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.