ಕೆರಾಡಿ ಚಂದ್ರಶೇಖರ ಶೆಟ್ಟಿಯವರಗೆ ಕುಂದಾಪುರ ಜಿಲ್ಲಾ ಹೋರಾಟ ಸಮಿತಿಯಿಂದ ಅಭಿನಂದನೆ

ಕುಂದಾಪುರ : ಜಿಲ್ಲಾ ಹೋರಾಟ ಸಮಿತಿಯು ,ಸಮಿತಿಯ ಉಪಾಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ನೂತನ ಕೊಲ್ಲೂರು ಮುಖಾಂಬಿಕ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುದಕ್ಕೆ ಕುಂದಾಪುರ ಜಿಲ್ಲಾ ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ನೇತೃತ್ವದ ನಿಯೋಗದೊಂದಿಗೆ ಜು. 17 ರಂದು ಕೊಲ್ಲೂರು ದೇಗುಲಕ್ಕೆ ತೆರಳಿ ಶೆಟ್ಟಿಯನ್ನು ಮಲ್ಲಿಗೆ ಹಾರ ಹಾಕಿ ಶಾಲುಹೊದೇಸಿ ,ಮೈಸೂರು ಪೇಟ ತೊಡಿಸಿ ಗೌರವಿಸಿದರು.

 ಕೆರಾಡಿ ಚಂದ್ರಶೇಖರ ಶೆಟ್ಟಿ, ನಿಮ್ಮೆಲ್ಲರ ಅಭಿಮಾನ ಹಾಗೂ ಆಶೀರ್ವಾದದಿಂದ ನಾನು ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗಿದ್ದೇನೆ. ಜನರು ಬಹುಕಾಲ ನೆನಪಿನಲ್ಲಿ ಉಳಿಯುವ ಕೆಲಸ ಮಾಡುವುದಾಗಿ ತಿಳಿಸಿದರು.ಆದರೂ ಸಹ ನಾನು ಮುಂದೆಯೂ ಸಹ ಕುಂದಾಪುರ ಜಿಲ್ಲಾ ಹೋರಾಟಕ್ಕೆ ಉಪಾಧ್ಯಕ್ಷ ನಾಗಿ ಮುಂದೆಯೂ ಸಹ ನಿಮ್ಮೆಲ್ಲರ ಜೊತೆ ಹೋರಾಡುತ್ತೇನೆ ಎಂದು ನಿಯೋಗಕ್ಕೆ ತಿಳಿಸಿದರು.

ಮುಂದಿನ ಹಂತವಾಗಿ ಜಿಲ್ಲಾ ಹೋರಾಟ ಸಮಿತಿಯು ಕುಂದಾಪುರ ಹಾಗೂ ಬೈಂದೂರು ಶಾಸಕರನ್ನು ಮುಖತ ಭೇಟಿಯಾಗುವುದು ಹಾಗೂ ಸದ್ಯದಲ್ಲಿಯೇ ಭಟ್ಕಳಕೆ ತೆರಳಿ ಶಾಸಕ ಸುನಿಲ್ ನಾಯ್ಕ್ ಭೇಟಿಯಾಗಲು ಭಟ್ಕಳಕ್ಕೆ ನಿಯೋಗ ಹೋಗುವುದೆಂದು ಅಲ್ಲೇ ತೀರ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ,ಕೆ.ಆರ್.ನಾಯಕ್,ಚಿಟ್ಟೆ ರಾಜಗೋಪಾಲ ಹೆಗ್ಡೆ,ಮುಂಬಾರು ದಿನಕರ ಶೆಟ್ಟಿ,ಗಣಪತಿ ಶ್ರೀಯನ್,ಭುಜಂಗ ಶೆಟ್ಟಿ, ಗೋಪಾಲ ಶೆಟ್ಟಿ,ಎ. ಆರ್.ಶೆಟ್ಟಿ,ದಸ್ತಗಿರಿ ಸಾಹೇಬ್,ಮಹೇಶ್ ಗಾಣಿಗ,ನವಿನಚಂದ್ರ ಶೆಟ್ಟಿ,ಚಂದ್ರಶೇಖರ ಆಚಾರ,ಓಂ ಗುರು,ಫಾಜಲ್ ಬಸ್ರುರ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply