ಬ್ರಾಹ್ಮಣ ಮಹಾ ಸಭಾ ಕೊಡವೂರು: ವಿಪ್ರ ಸೇನಾನಿ‌ಪ್ರಶಸ್ತಿ ಪುರಸ್ಕಾರ

ಸೇನೆಯಲ್ಲಿ ತಮ್ಮ ಸೇವೆಯನ್ನು ಅತ್ತ್ಯುತ್ತಮವಾಗಿ ನಿರ್ವಹಿಸಿ ಬದುಕಿ ಉಳಿದು ಮತ್ತೆ ಎಲ್ಲರಂತೆ ಜೀವನ ಸಾಗಿಸುವ ಅವಕಾಶ ಸಿಕ್ಕರೆ ಮಾಜಿ ಸೈನಿಕರಿಗೆ ಅದುವೆ ದೊಡ್ಡ ಬಹುಮಾನ ಎಂದು ಸ್ಕ್ವಾಡ್ರನ್ ಲೀಡರ್ ಕೆ. ಶಿವರಾಮ ಮಂಜ ಅಭಿಪ್ರಾಯಪಟ್ಟರು.

ಅವರು ಕೊಡವೂರು ಬ್ರಾಹ್ಮಣ ಮಹಾ ಸಭಾ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿಪ್ರಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪ್ರಸೇನಾನಿ ಪುರಸ್ಕಾರ ಪ್ರದಾನ ಹಾಗು ದೇಶಭಕ್ತಿ ಗೀತೆ ಹಾಗು ರಸಪ್ರಶ್ನೋತ್ತರ ಸ್ಪರ್ಧಾ ಕಾರ್ಯಕ್ರಮಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿ ಮಾತನಾಡಿದರು. ಕೊಡವೂರು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ ಸ್ವಾಗತಿಸಿದರು. ಅಶ್ವಿನಿ ಶ್ರೀನಿವಾಸ್ ಪ್ರಾರ್ಥಿಸಿದರು. ಚಂದ್ರಶೇಖರ ರಾವ್ ಪ್ರಸ್ತಾವನೆ ಮಾಡಿದರು.

ದೀಪಾ ರಾಮಕೃಷ್ಣ, ರುಕ್ಮಿಣಿ ಬಲ್ಲಾಳ್,‌ ಭಾರತಿ ಸುಬ್ರಹ್ಮಣ್ಯ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಶ್ರೀಧರ ಶರ್ಮ ಬಹುಮಾನಿತರ ವಿವರ ನೀಡಿದರು. ಗೌರವಾಧ್ಯಕ್ಷ ಗೋವಿಂದ ಐತಾಳ್ ಉಪಸ್ಥಿತರಿದ್ದರು. ಸ್ಕ್ವಾಡ್ರನ್ ಲೀಡರ್ ಕೆ. ಶಿವರಾಮ ಮಂಜ, ಕೆ ಆರ್ ಬಾಲಚಂದ್ರ, ಕೆ.ಮಂಜುನಾಥ ಪಾಡಿತ್ತಾಯ ಇವರಿಗೆ ವಿಪ್ರಸೇನಾನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ಕಲ್ಪನಾ ಅನಂತ ಭಟ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply