ಉಡುಪಿ : ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ
ಪ್ರವರ್ತಕರಾದ ಶ್ರೀ ಎಚ್. ಎಸ್. ಶೆಟ್ಟಿ ಬೆಂಗಳೂರು ಇವರ
ಪ್ರಾಯೋಜಕತ್ವದಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ
ಬೊಮ್ಮರಬೆಟ್ಟುವಿನ ಮಂಜುಶ್ರೀ (ದ್ವಿತೀಯ ಪಿ.ಯು.ಸಿ)
ಹಾಗೂ ಅಲ್ತಾರಿನ ಪೂರ್ಣಿಮಾ (ದ್ವಿತೀಯ ಪಿ.ಯು.ಸಿ) ಇವರಿಗೆ
ನಿರ್ಮಿಸಲಾದ ನೂತನ ಮನೆ ‘ರಾಜೀವ ಸದನ’ ಇದರ
ಉದ್ಘಾಟನೆಯು ಇಂದು (೧೬-೧೧-೨೦೨೨) ಜರಗಲಿದೆ. ಶ್ರೀ ಎಚ್. ಎಸ್.
ಶೆಟ್ಟಿ ಅವರು ಮನೆಯನ್ನು ಉದ್ಘಾಟಿಸಲಿರುವರು. ಟ್ರಸ್ಟ್ನ
ಉಪಾಧ್ಯಕ್ಷರಾದ ಶ್ರಿ ಎಚ್. ನಾಗರಾಜ ಶೆಟ್ಟಿ
ಉಪಸ್ಥಿತರಿರುವರು. ಇದು ಸಂಸ್ಥೆಯು ದಾನಿಗಳ
ನೆರವಿನಿಂದ ನಿರ್ಮಿಸಿದ 35 ಮತ್ತು 36ನೇಯ ಮನೆಯಾಗಿದೆ
ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.
ಗAಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.