ಉಡುಪಿ, ನ. 8: ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿ೦ದ ದಿನಾ೦ಕ ಬುಧವಾರ ‘ಕೆಬಿಎಲ್ ಕಾರ್ ಲೋನ್’ ಮೇಳವನ್ನು ಕರ್ಣಾಟಕ ಬ್ಯಾಂಕ್ನ ಪ್ರಾದೇಶಿಕ ಕಛೇರಿಯ ಆವರಣದಲ್ಲಿ ಚಾಲನೆ ನೀಡಲಾಯಿತು.
ಕರ್ಣಾಟಕ ಬ್ಯಾ೦ಕ್ ತನ್ನ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ‘ಕೆಬಿಎಲ್ ಉತ್ಸವ’ ವನ್ನು ಆಚರಿಸುತ್ತಿದ್ದು ಗೃಹ, ಕಾರು, ಚಿನ್ನ ಹಾಗೂ ಕೃಷಿ ಸಾಲಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಮಂಜೂರಾತಿ, ಸಂಸ್ಕರಣಾ ಶುಲ್ಕ ರಿಯಾಯಿತಿ ಸೇರಿ ಹಲವು ಪ್ರಯೋಜನಗಳನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ.
ಈ ಅಭಿಯಾನದ ಅಂಗವಾಗಿ ಆಯೋಜಿಸಿದ ‘ಕೆಬಿಎಲ್ ಕಾರ್ ಲೋನ್’ ಮೇಳವನ್ನು ಕರ್ಣಾಟಕ ಬ್ಯಾಂಕ್ನ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ರಾಜಗೋಪಾಲ.ಬಿ. ಉದ್ಘಾಟಿಸಿದರು. ಗ್ರಾಹಕರು ಕಂಪೆನಿಗಳಿಂದ ಆಕರ್ಷಕ ರಿಯಾಯಿತಿಗಳ ಜೊತೆಗೆ ಬ್ಯಾ೦ಕ್ ಪ್ರೊಸೆಸಿಂಗ್ ವೆಚ್ಚದಲ್ಲಿ ಶೇಕಡಾ 50% ಕಡಿತ, ಮೂಲ ಬಡ್ಡಿಯಲ್ಲಿ ವಿನಾಯಿತಿ, ಕ್ಷಿಪ್ರ ಡಿಜಿಟಲ್ ಮಂಜೂರಾತಿ ಸಹಿತ ಸರಳ ಪ್ರಕ್ರಿಯೆಗಳ ಸದಾವಕಾಶಗಳನ್ನು ಪಡೆದುಕೊಳ್ಳ ಬಹುದು ಎಂದು ಅವರು ತಿಳಿಸಿದರು.
ಪ್ರತಿಷ್ಠಿತ ಕಾರ್ ವಿತರಕರಾದ ಆಭರಣ ಮೋಟರ್ಸ್, ಕಾಂಚನಾ ಹ್ಯುಂಡೈ, ಯುನೈಟೆಡ್ ಟೊಯೋಟಾ, ಆಟೋ ಮ್ಯಾಟ್ರಿಕ್ಸ್, ಟಾಟ ಮೋಟರ್ಸ್, ಮಹಿಂದ್ರಾ ಕರ್ನಾಟಕ ಎಜೆನ್ಸಿಸ್, ಎ.ಅರ್.ಎಮ್ ಮೋಟರ್ಸ್ ಕಿಯಾ, ತಮ್ಮ ಕಂಪೆನಿಗಳ ವಿವಿಧ ಕಾರು ಮೊಡೆಲ್ಗಳನ್ನು ಪ್ರದರ್ಶಿಸಿದರು. ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಮನೋಜ್ ಕೋಟ್ಯಾನ್ ಸ್ವಾಗತಿಸಿದರು. ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿಎಲ್ ಇಡಿ ಮೊಬೈಲಿಟಿ ಪ್ರಚಾರ ವಾಹನಕ್ಕೆ ಕರ್ಣಾಟಕ ಬ್ಯಾಂಕ್ನ ಪ್ರಾದೇಶಿಕ ಕಛೇರಿಯ ಸಹಾಯಕ ಮಹಾ ಪ್ರಬಂಧಕ ರಾಜಗೋಪಾಲ.ಬಿ. ಚಾಲನೆ ನೀಡಿದರು