ಕಟೀಲಿನಲ್ಲಿ ತುಳು ಲಿಪಿಯ ನಾಮಫಲಕ ಲೋಕಾರ್ಪಣೆ

ಕಟೀಲು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತುಳು ಭಾಷೆ ಹಾಗೂ ತುಳು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹೆಸರಿನ ತುಳುಲಿಪಿಯ ನಾಮಫಲಕವನ್ನು ಲೋಕಾರ್ಪಣೆ ಗೊಳಿಸಿದರು.  

ಬಳಿಕ ಅವರು ಮಾತನಾಡಿ ತುಳು ಪ್ರಧಾನವಾದ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳುವಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತಿದ್ದು ತುಳು ಲಿಪಿ ಜೊತೆಗೆ ತುಳು ಸಂಸ್ಕೃತಿಯ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಕರೆ ಇತ್ತರು. 

 
 
 
 
 
 
 
 
 
 
 

Leave a Reply