ಕಡಿಯಾಳಿ: ಸಾವಿರ ಮನೆಗಳಲ್ಲಿ ಗ್ರಾಮ ಭಜನೆ

ಉಡುಪಿ, ಎ. 16: ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಆಯೋಜಿಸಿರುವ ಮನೆಮನೆ ಭಜನೆ- ಗ್ರಾಾಮ ಭಜನೆ ಕಾರ್ಯಕ್ರಮದಲ್ಲಿ 1,292ಮನೆಗಳಲ್ಲಿ ಭಜನ ಸೇವೆ ಸಂಪನ್ನಗೊಂಡಿದೆ.
ಎ. 2ರಿಂದ ಆರಂಭಗೊಂಡ ಈ ಮನೆಮನೆ ಭಜನೆ-ಗ್ರಾಾಮ ಭಜನೆಯು ಎ. 23ರ ವರೆಗೆ ನಡೆಯಲಿದೆ. ನಾರಾಯಣಿ, ಶಾಂಭವಿ, ಭೈರವಿ, ಪಾರ್ವತಿ, ಕಾತ್ಯಾಾಯಿನಿ ಎಂಬ ಐದು ತಂಡಗಳು ದಿನಕ್ಕೆೆ ಒಟ್ಟು 75 ಮನೆಗಳನ್ನು ಸಂದರ್ಶಿಸಿ ಭಜನೆಗಳನ್ನು ಹಾಡುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತಿ ತಂಡದಲ್ಲಿ ಮಹಿಳೆಯರು ಸೇರಿ80 ವರ್ಷದವರೆಗಿನ ಭಜನ ಕಲಾವಿದರು ಇದ್ದಾರೆ ಒಟ್ಟು 2,000 ಮನೆಗಳ ಗುರಿ ಇದ್ದು ಶುಕ್ರವಾರದವರೆಗೆ ಅರ್ಧಾಂಶದಷ್ಟು ಅಂದರೆ 1,292ಮನೆಗಳಲ್ಲಿ ಭಜನ ಸೇವೆ ನಡೆದಿದೆ.

ಮನೆಗಳಲ್ಲಿ ಈ ಕಾರ್ಯಕ್ರಮಕ್ಕೆೆ ತುಂಬು ಉತ್ಸಾಾಹ ಕಂಡುಬಂದಿದೆ. ಉಡಿ ತುಂಬುವುದು, ಹೂವು ಸಮರ್ಪಣೆ, ಬಟ್ಟೆೆ ವಿತರಣೆ, ಸಾಂಪ್ರದಾಯಿಕ ತಿನಿಸು ವಿತರಣೆ ನಡೆಯುತ್ತಿದೆ ಭಕ್ತಿಭಾವದಿಂದ ಭಜನ ತಂಡದವರನ್ನು ಮನೆಯವರು ಸ್ವಾಗತಿಸುತ್ತಿದ್ದಾಾರೆ. ಒಟ್ಟಾಾರೆ ಭಜನ ತಂಡದವರು ಮನೆಗಳಿಗೆ ಭೇಟಿ ನೀಡಿ ಹಾಡುವುದು ಹಬ್ಬದ ವಾತಾವರಣ ಸೃಷ್ಟಿಿಸಿದೆ

ಎ. 23: ಸಮಾರೋಪ
ಗ್ರಾಮ ಭಜನೆ ಕಾರ್ಯಕ್ರಮದ ಸಮಾರೋಪ ಎ. 23ರ ಸಂಜೆ 4.30ಕ್ಕೆೆ ನಡೆಯಲಿದೆ. ಶ್ರೀಕೃಷ್ಣಮಠದಿಂದ ಕಡಿಯಾಳಿ ದೇವಸ್ಥಾಾನದವರೆಗೆ ಭಜನ ಮೆರವಣಿಗೆ ನಡೆಯಲಿದೆ ಬಳಿಕ ಕಡಿಯಾಳಿ ದೇವಸ್ಥಾಾನದ ವಠಾರದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ವಿಶೇಷವೆಂದರೆ ಯಾರ ಮನೆಗಳಿಗೆ ಭಜನ ತಂಡಗಳು ಭೇಟಿ ನೀಡಿ ಭಜನ ಸೇವೆ ಸಲ್ಲಿಸಿದೆಯೋ ಆ ಮನೆಯವರು ಸಮಾರೋಪ ಸಮಾರಂಭದ ಭಜನ ಮೆರವಣಿಗೆಯಲ್ಲಿ ಪಾಲ್ಗೊೊಳ್ಳಲು ಆಹ್ವಾಾನಿಸಿದ್ದು ಇವರು ಭಾಗವಹಿಸಲಿದ್ದಾಾರೆ*.

ಭಜನ ಮಂಗಲದ ಪೋಸ್ಟರ್ ಅರವಿಂದ ಕೆಪಿ ಬಿಡುಗಡೆ
ಗ್ರಾಮ ಭಜನ ಮಂಗಲೋತ್ಸವದ ಪೋಸ್ಟರ್‌ನ್ನು ಶನಿವಾರ ಬಿಗ್ ಬಾಸ್ ಪ್ರಸಿದ್ಧಿಯ ಹೆಸರಾಂತ ಬೈಕ್ ರೇಸರ್, ಕಡಿಯಾಳಿ ದೇವಸ್ಥಾಾನದ ಅರ್ಚಕ ಕುಟುಂಬದ ಸದಸ್ಯ ಅರವಿಂದ ಕೆ.ಪಿ. ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಜೀರ್ಣೋದ್ಧಾಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್ ಹೆಗ್ಡೆೆ, ಪ್ರ.ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ, ವ್ಯವಸ್ಥಾಾಪನ ಸಮಿತಿ ಅಧ್ಯಕ್ಷ ಡಾ.ರವಿರಾಜ ಆಚಾರ್ಯ, ಭಜನ ತಂಡಗಳ ಮುಖ್ಯಸ್ಥರಾದ ಜೀವರತ್ನ ದೇವಾಡಿಗ, ಸುಮಲತಾ ಉದಯ್, ಅಶ್ವಿನಿ ಪೈ ಗೀತಾ ನಾಯಕ್, ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply