ಮಹೇಶ್ ಹೈಕಾಡಿ ಸಂಪಾದಕತ್ವದ ‘ಕಾವ್ಯೋತ್ಸವ’ ಕವನ ಸಂಕಲನ ಅನಾವರಣ

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ 16ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2023 ಕಾರ್ಯಕ್ರಮದಲ್ಲಿ ಮಹೇಶ್ ಹೈಕಾಡಿ ಅವರ ಸಂಪಾದಕತ್ವದ ಕಾವ್ಯೋತ್ಸವ ಕವನ ಸಂಕಲನ ಅನಾವರಣಗೊಂಡಿತು ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಏರ್ಪಡಿಸಿದ ಕವಿಗೋಷ್ಠಿಯಲ್ಲಿ ವಾಚಿಸಿದ ಕವನಗಳ ಸಂಕಲನವಾಗಿದೆ. ಶ್ರೀಯುತ ಪಾಂಡುರಂಗ ಪೈ ಅಧ್ಯಕ್ಷರು ವಿದ್ಯಾಭ್ಯಾತಿ ಕರ್ನಾಟಕ ಉಡುಪಿ ಜಿಲ್ಲೆ ಕವನ ಸಂಕಲನವನ್ನು ಅನಾವರಣಗೊಳಿಸಿದರು ಅನಾವರಣ ಸಮಾರಂಭದ ವೇದಿಕೆಯಲ್ಲಿ ಶ್ರೀ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನಿವೃತ್ತ ಅಧ್ಯಾಪಕರು, ಶ್ರೀ ಗುರುದಾಸ ಶೆಣೈ ಕಾರ್ಯದರ್ಶಿ ಅಮೃತ ಭಾರತಿ ಟ್ರಸ್ಟ್ ಶ್ರೀ ಬಿ.ಕೆ ರಾಮಕೃಷ್ಣ ಕೋಶಾಧಿಕಾರಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply