ಹೆತ್ತ ತಂದೆ- ತಾಯಿಯನ್ನು ಕೊಂದು ಪಾಪಿ ಮಗ ಪರಾರಿ!

ಬಳ್ಳಾರಿ ರಸ್ತೆಯಲ್ಲಿರುವ ಬ್ಯಾಟರಾಯನಪುರದಲ್ಲಿ ಭಾಸ್ಕರ್ (63) ಹಾಗೂ ಪತ್ನಿ ಶಾಂತಾ (60) ಅವರನ್ನು ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದಾನೆ ಎನ್ನಲಾದ ಮಗ ಶರತ್‌ (26) ಪರಾರಿಯಾಗಿದ್ದಾನೆ.

‘ಮಂಗಳೂರಿನ ಭಾಸ್ಕರ್‌–ಶಾಂತಾ, ಹಲವು ವರ್ಷಗಳಿಂದ ಬ್ಯಾಟರಾಯನಪುರದಲ್ಲಿ ನೆಲೆಸಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಮಗ ಶರತ್, ತಂದೆ–ತಾಯಿಯನ್ನು ಕೊಂದು ಪರಾರಿಯಾಗಿದ್ದಾನೆ. ಮೊದಲ ಮಗ ಸಜಿತ್, ಕೊಲೆ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಮೃತ ಶಾಂತಾ, ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ಭಾಸ್ಕರ್, ಹೋಟೆಲೊಂದರಲ್ಲಿ ಕ್ಯಾಷಿಯರ್ ಕೆಲಸ ಮಾಡುತ್ತಿದ್ದರು. ಮೊದಲ ಮಗ ಸಚಿತ್, ಕಂಪನಿಯೊಂದರ ಉದ್ಯೋಗಿ. ಕೆಲಸವಿಲ್ಲದೇ ಮನೆಯಲ್ಲಿದ್ದ ಶರತ್, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆಗಾಗ ಮದ್ಯ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.

 
 
 
 
 
 
 
 
 
 
 

Leave a Reply