ಬಳಿಕ ಅನೇಕ ಭಕ್ತ ಜನರ ಸಮ್ಮುಖದಲ್ಲಿ ಸಹಸ್ರ ಗಣಪತ್ಯಥರ್ವ ಶೀರ್ಷ ಯಾಗ ಸಂಪನ್ನ ಗೊಂಡಿತು. ಸಾಯಂಕಾಲ ಶ್ರೀನಿವಾಸ ದೇವರಿಗೆ ರಂಗಪೂಜೆ ಥೋತ್ಸವ ನಡೆದು, ಶ್ರೀನಿವಾಸನ ಉತ್ಸವಮೂರ್ತಿಯ ಅಟ್ಟೆಪಲ್ಲಕ್ಕಿ ಕುಣಿತ ಜನರ ವಿಶೇಷ ಮೆಚ್ಚುಗೆ ಗೆ ಪಾತ್ರವಾಯಿತು .
ಈ ಉತ್ಸವದಲ್ಲಿ ಪ್ರಮುಖವಾಗಿ ಚೆಂಡೆ ಸುತ್ತು, ಹರಿಭಜನೆ ಸುತ್ತುಗಳ ನರ್ತನಗಳಿಂದ ಉಡುಪಿಯ ಭವ್ಯ ಉತ್ಸವಪರಂಪರೆಯನ್ನು ಈ ನೆಲದಲ್ಲಿ ಪರಿಚಯಿಸಿದಂತಾಯಿತು. ಪೂಜ್ಯಶ್ರೀಪಾದರು ಈ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದ ವೈದಿಕ ವಿದ್ವಾಂಸ ರನ್ನು ಶಾಲು ಹೊದಿಸಿ ಆಶೀರ್ವದಿಸಿದರು. ಒಟ್ಟಿನಲ್ಲಿ ಹತ್ತು ದಿನಗಳ ಎಡೆಬಿಡದ ಈ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಂದ ಭಕ್ತಜನತೆ ಪುಳಕಿತಗೊಂಡರು.