ಕುರ್ಕಾಲು ಸುಭಾಷ್ ನಗರ ಬಳಿ ಅಪಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ಪಾಂಗಾಳ ಜೆ.ಎನ್ ಮೋಟರ್ಸ್ ಮಾಲಕ ಹರಿದಾಸ್ ಭಟ್ ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ . ಶನಿವಾರ ಬೆಳಿಗ್ಗೆ ಸುಭಾಸ್ ನಗರ ಸಮೀಪ ದ್ವಾರದ ಬಳಿ ರಿಕ್ಷಾ ಡಿಕ್ಕಿ ಹೊಡೆದು ಹರಿದಾಸ್ ಭಟ್ ಅವರಿಗೆ ಗಂಭೀರ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ .
45 ವರ್ಷಗಳಿಂದ ಸಾರಿಗೆ ಉದ್ಯಮವನ್ನು ನಡೆಸುತ್ತಿದ್ದರು. ದೇಶಾದ್ಯಂತ ಪ್ರವಾಸಿಗರನ್ನು ಕರೆದೊಯ್ದು ಜೆ.ಎನ್. ಭಟ್ ಎಂದೇ ಪರಿಚಿತರಾಗಿದ್ದರು. ಪಾಂಗಳ ಜನಾರ್ದನ ದೇವಸ್ಥಾನದ ಸೇವಾ ಸಮಿತಿ, ಗಣೇಶೋತ್ಸವ ಸಮಿತಿ ಜಿಲ್ಲಾ ಟೆಂಪೋ ಚಾಲಕರ ಮತ್ತು ಮಾಲಕರ ಮಾಲಕರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು