ನಾಡೋಜ ಡಾ.ಜಿ.ಶಂಕರ್ ರವರಿಂದ ಉಡುಪಿ ರಾಜ್ಯ ಮಹಿಳಾ ನಿಲಯಡಾ ನಿವಾಸಿನಿಯರಿಗೆ ಅಗತ್ಯ ವಸ್ತುಗಳ ಕೊಡುಗೆ  

ನಾಡೋಜ ಡಾ.ಜಿ.ಶಂಕರ್ ಅವರಿಂದ ಉಡುಪಿ ರಾಜ್ಯ ಮಹಿಳಾ ನಿಲಯ ಉಡುಪಿ,ಇಲ್ಲಿನ ಅನಾಥ ನಿವಾಸಿನಿಯವರಿಗೆ, ಶೋಷಣೆಗೆ ಒಳಪಟ್ಟ ಹಾಗೂ ಪರಿತ್ಯಕ್ತ 72 ನಿವಾಸಿ ನಿಯರಿಗೆ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ  ಸೀರೆ, ರವಿಕೆ, ಲಂಗ, ಒಳ ಉಡುಪುಗಳು ಹಾಗೂ ಐದು ವರ್ಷದ ಒಳಗಿನ ನಾಲ್ಕು ಮಕ್ಕಳಿಗೆ ಡ್ರೆಸ್ ಗಳನ್ನು ವಿತರಿಸಲಾಯಿತು.  
ಅಲ್ಲದೆ ಪ್ರತಿಯೊಬ್ಬರಿಗೂ ಎರಡು ಜೊತೆ ಚಪ್ಪಲಿಗಳನ್ನು ಮತ್ತು ಸಂಸ್ಥೆಯಲ್ಲಿ ವಿದ್ಯುತ್ ಕಡಿತಗೊಂಡಾಗ ಪರ್ಯಾಯ ವ್ಯವಸ್ಥೆಗಾಗಿ ಲುಮಿನಸ್ ಇನ್ವರ್ಟರ್ ಅನ್ನು ಹಾಗೂ ಇತರ ಅವಶ್ಯವಿರುವ ಸಾಮಾಗ್ರಿಗಳ ಕೊಡುಗೆಗಳನ್ನು ನೀಡಿರುತ್ತಾರೆ. 
 ಸದ್ರಿ ಅವಶ್ಯಕ ಸಾಮಗ್ರಿಗಳನ್ನು  ಜಿ ಶಂಕರ್ ಅವರ ಪತ್ನಿ ಶಾಲಿನಿ ಶಂಕರ್ ಹಾಗು ಪುತ್ರಿ ಶಾಮಿಲಿ ಅವರು ಶ್ರೀ ಸೇವಾ ನಿಕೇತನ ಉಡುಪಿ ಇದರ ಅಧೀಕ್ಷಕಿ ಲೀಲಾವತಿಯವರ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ನಿಲಯ ಉಡುಪಿ ನಿಲಯದ ನಿವಾಸಿನಿಯವರಿಗೆ ನೀಡಿದರು
 
 
 
 
 
 
 
 
 
 
 

Leave a Reply